ಕಲಬುರಗಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅತಿ ಹೆಚ್ಚು ಲವ್ ಜಿಹಾದ್, ಗೋ ಹತ್ಯೆ ಪ್ರಕರಣ ನಡೆಯುತ್ತಿದೆ. ಆದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಆತ್ಮರಣೆಗೆ ಹಣ ನೀಡುತ್ತಾರೆ. ಜಿಹಾದ್ಗೆ ಪ್ರಾಣ ಕಳೆದುಕೊಳ್ಳುತ್ತಿರುವುದು ಹಿಂದು ಹೆಣ್ಣು ಮಕ್ಕಳು. ಇಂತಹ ಸಣ್ಣ ವಿಷಯ ಅರ್ಥ ಮಾಡಿಕೊಳ್ಳಲು ಆಗದ ಲಜೆಗೆಟ್ಟ ಸಿಎಂ ಪಡೆದಿರುವುದು ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಭಾರತೀಯ ಜನತಾ ಪದಿಂದ ಶುಕ್ರವಾರ ಹಮ್ಮಿಕೊಂಡ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ಅಂಬೇಡ್ಕರ್ ಹೆಸರಿನಲ್ಲಿ ದಲಿತ ರಾಜಕಾರಣ ಮಾಡುವ ಕಾಂಗ್ರೆಸ್ಸಿಗರು ಬೆಂಗಳೂರಿನಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಮರೆತ್ತಿದ್ದು, ಜನರನ್ನು ಭಿುಕರಂತೆ ನೋಡುತ್ತಿದ್ದಾರೆ. ಉಚಿತ ಬಸ್ ಎನ್ನುತ್ತಾರೆ. ಗ್ರಾಮೀಣ ಭಾಗದಲ್ಲಿ ಶಾಲೆಗೆ ಹೋಗಲು ಬಸ್ಗಳಿಲ್ಲ. ಸರ್ಕಾರಕ್ಕೆ ದುಡ್ಡು ಕೊಡಲು ಆಗುತ್ತಿಲ್ಲ. ಹೊಸ ಕೈಗಾರಿಕೆಗಳು ಬರುತ್ತಿಲ್ಲ. ಸರ್ಕಾರದ ರ್ನಿಲ$್ಯಕ್ಕೆ ಕಂಪನಿಗಳು ರಾಜ್ಯ ಬಿಟ್ಟು ಹೋಗುತ್ತಿವೆ. ಡಿಸೇಲ್ ಬೆಲೆ ಹೆಚ್ಚಿಸಿದ್ದು, ಹೊಲ ಊಳುವ ರೈತರು ಟ್ರಾ$್ಯಕ್ಟರ್, ಟಿಲ್ಲರ್, ಇಂಜಿನ್ ಓಡಿಸಲು ಆಗುತ್ತಿಲ್ಲ. ಟಿಸಿ, ಹಾಲಿನ ಬೆಲೆ ಹೆಚ್ಚಿಸಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪ ಸೇರಿ ಬಿಜೆಪಿ ಸರ್ಕಾರದಲ್ಲಿ ಎಷ್ಟು ಅನುದಾನ ದೊರಕಿದೆ. ಸಿದ್ದರಾಮಯ್ಯ ಎಷ್ಟು ನೀಡಿದ್ದಾರೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ಪ್ರತಿಪ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ಸಿಗರು ದಲಿತರ ಭಕರಾಗಿದ್ದಾರೆ. ದಲಿತರಿಗೆ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 42 ಸಾವಿರ ಕೊಟ್ಟಿದ್ದೇವೆ ಎಂದು ಹೇಳಿ, 21 ಸಾವಿರ ಕೋಟಿಯನ್ನು ಕಾಕಾ ಪಾಟೀಲ್, ಮಹಾದೇವಪ್ಪ, ಅವರ ಹೆಂಡತಿಗೆ ಗ್ಯಾರಂಟಿ ಎಂದು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಮಾತೆತಿದರೆ ದಲಿತ ಎನ್ನುವ ಎಐಸಿಸಿ ಅಧ್ಯ ಡಾ.ಮಲ್ಲಿಕಾರ್ಜುನ ರ್ಖಗೆ, ಚೋಟಾ ರ್ಖಗೆ ದಲಿತರಿಗೆ ಆಗಿದ ಅನ್ಯಾಯ ಪ್ರಶ್ನಿಸುವ ಧೈರ್ಯ, ತಾಕತ್ತು ಪ್ರದರ್ಶಿಸಲಿ. ದಲಿತರನ್ನು ಬಿಟ್ಟು ಬರೀ ತಮ್ಮ ಕುಟುಂಬವನ್ನು ತುಂಬಿಕೊಳ್ಳುತ್ತಿದ್ದಾರೆ. ಮೊಲರ ಸಾಮ್ರಾಜ್ಯ ಜೀವಂತವಿದ್ದು, ಒಂದೇ ಮನೆತನಕ್ಕೆ ಅಧಿಕಾರವಿದೆ. ಎಂಟು ಮೀಸಲು ೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಎರಡು ಸ್ಥಾನ. ಶಾಸಕ, ರಾಜ್ಯಸಭೆ ಸದಸ್ಯ, ಲೋಕಸಭೆ ಸದಸ್ಯ ಎಲ್ಲವೂ ತಾವೇ ಆಗಬೇಕು. ದಲಿತರಿಗೆ ಅನ್ಯಾಯ ಎನ್ನುವ ಕಾಂಗ್ರೆಸ್ 65 ವರ್ಷ ಕಡ್ಲೆಪುರಿ ತಿನ್ನುತ್ತಿದ್ದರಾ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಲಬುರಗಿಯಲ್ಲಿ ಪ್ರಿಯಾಂಕ್ ರ್ಖಗೆ ಛೇಲಾಗಳು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಹಿಟ್ಲರ್ ಮಾದರಿ ಅಧಿಕಾರ ನಡೆಸಿದರೆ ಸುಮ್ಮನೆ ಕೂಡಲ್ಲ. ಒಂದು ಕೆಡಿಪಿ ಮೀಟಿಂಗ್ ಮಾಡುವ ಯೋಗ್ಯತೆ ಸಚಿವನಿಗೆ ಇಲ್ಲ. ಜಂಭ ಕೊಚ್ಚಿಕೊಳ್ಳಬಾರದು. ಬಿಜೆಪಿ, ಬಜರಂಗದಳ, ಆರ್ಎಸ್ಎಸ್, ವಿಎಚ್ಪಿ ಕಾರ್ಯಕರ್ತರ ಬಗ್ಗೆ ಮಾತಾಡಿದರೆ ಸುಮ್ಮನಿರಲ್ಲ ಎಂದು ಕಿಡಿ ಕಾರಿದರು.
ವಿಧಾನ ಪರಿಷತ್ ಮುಖ್ಯಸಚೇತಕ ಎನ್.ರವಿಕುಮಾರ ಮಾತನಾಡಿ, ಭ್ರಷ್ಟ ಸರ್ಕಾರ ತೊಲಗಿಸಲು ಜನರ ಸ್ವಯಂ ಪ್ರೇರಿತರಾಗಿ ಆಕ್ರೋಶ ಯಾತ್ರೆಗೆ ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಡಾ.ಮಲ್ಲಿಕಾರ್ಜುನ ರ್ಖಗೆ ಅಭಿವೃದ್ಧಿಯ ಕೊಡುಗೆ ಏನು ತಿಳಿಸಲಿ? ಎಷ್ಟು ಎಕರೆ ನೀರಾವರಿ ಮಾಡಿದ್ದಾರೆ ತಿಳಿಸಿ, ಶಿಣ ಸುಧಾರಣೆಗೆ ಏನು ಮಾಡಿದ್ದಾರೆ ಎಂಬುದಕ್ಕೆ ಪಿಯುಸಿ ಲಿತಾಂಶವೇ ಸಾ ಎಂದು ಕಿಡಿ ಕಾರಿದರು.
ಟಿಸಿಗೆ ಬಿಜೆಪಿ ಸರ್ಕಾರದಲ್ಲಿ 30 ಸಾವಿರ ಇದ್ದಿದ್ದು, ಇದೀಗ ಎರಡು ಲ ಮಾಡಿದ್ದಾರೆ. ಶಿಣವಿಲ್ಲದೆ ಸುಧಾರಣೆ ಇಲ್ಲ, ನೀರಾವರಿ ಇಲ್ಲದೇ ರೈತರ ಅಭಿವೃದ್ಧಿ ಸಾಧ್ಯವಿಲ್ಲ. ತೊಗರಿ ಬೆಳೆದ ರೈತರಿಗೆ ಪರಿಹಾರ ನೀಡಿಲ್ಲ. ಪರಿಹಾರ ನೀಡಿದ್ದೇನೆ ಎನ್ನುವ ಪ್ರಿಯಾಂಕ್ ರ್ಖಗೆಗೆ ತೊಗರಿ ರೈತರಿಗೆ ಬಂದಿದ್ದು, ಕೇಂದ್ರ ಸರ್ಕಾರದ ಸಲ್ ಭಿಮಾ ಯೋಜನೆಯ ಹಣ ಎಂಬುದು. ಹಿಂದೆ ಪ್ರತಿಭಟನೆ ಮಾಡಿ, ಆಗ್ರಹಿಸಿದಂತೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಶಾಸಕರಾದ ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ ನಮೋಶಿ, ಡಾ.ಅವಿನಾಶ ಜಾಧವ್, ಸುನೀಲ ವಲ್ಯಾಪುರೆ, ಮಾಜಿ ಸಂಸದ ಡಾ.ಉಮೇಶ ಜಾಧವ್, ರಾಜ್ಯ ಕಾರ್ಯದರ್ಶಿಗಳಾದ ತಮ್ಮೇಶಗೌಡ, ಶರಣು ತಳ್ಳಿಕೇರಿ, ರೈತ ಮೋರ್ಚಾ ಅಧ್ಯ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ, ಸುಭಾಷ ಗುತ್ತೇದಾರ್, ಅಮರನಾಥ ಪಾಟೀಲ್, ಬಾಬುರಾವ ಚವ್ಹಾಣ್, ಬಿಜೆಪಿ ಮಹಾನಗರ ಜಿಲ್ಲಾಧ್ಯ ಚಂದು ಪಾಟೀಲ್, ಪ್ರಮುಖರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ಅಶೋಕ ಬಗಲಿ, ನಿತೀನ್ ಗುತ್ತೇದಾರ್, ಅವ್ವಣ್ಣ ಮ್ಯಾಕೇರಿ, ಭಾಗಿರಥಿ ಗುನ್ನಾಪುರ, ಜಯಶ್ರೀ ಮತ್ತಿಮಡು ಇತರರಿದ್ದರು. ಗ್ರಾಮಾಂತರ ಜಿಲ್ಲಾಧ್ಯ ಅಶೋಗ ಬಗಲಿ ಸ್ವಾಗತಿಸಿದರು. ಶಿವಯೋಗಿ ನಾಗನಳ್ಳಿ ವಂದಿಸಿದರು. ಮಹಾದೇವ ಬೆಳಮಗಿ ನಿರೂಪಣೆ ಮಾಡಿದರು.
ಲಜ್ಜೆಗೆಟ್ಟ ಸಿಎಂ ಆಡಳಿತಕ್ಕೆ ಜಿಹಾದ್ ಹೆಚ್ಚಳ

You Might Also Like
ನಿಮ್ಮ ಮುಖದಲ್ಲಿ ಬೇಡದ ಕೂದಲು ಇದೆಯೇ? ಈ ಸಲಹೆಗಳನ್ನು ಅನುಸರಿಸಿ..Unwanted Hair
Unwanted Hair : ಮುಖದ ಮೇಲೆ ಬೇಡದ ಕೂದಲು ಸಾಮಾನ್ಯ ಆದರೆ ಮಹಿಳೆಯರಿಗೆ ಮುಜುಗರದ ಸಮಸ್ಯೆಯಾಗಿದೆ.…
ಕೇವಲ 2 ಚಮಚ ಉಪ್ಪು ಇದ್ದರೆ ಸಾಕು ಮನೆಗೆ ಇರುವೆ, ಜಿರಳೆ ಬರದಂತೆ ತಡೆಯಬಹುದು..| Salt
Salt: ಉಪ್ಪು ಅಡಿಗೆಗೆ ರುಚಿಯನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ಅಡುಗೆ ಮನೆಯ ಸ್ವಚ್ಛತೆಗೂ ಸಹಾಯ…
ಜಸ್ಟ್ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin
Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…