ಕಾರವಾರ: ಕೈಗೆ ಅನಾಯಾಸವಾಗಿ ಸಿಕ್ಕ ಲಕ್ಷಾಂತರ, ದುಡ್ಡು, ಬಂಗಾರಕ್ಕೆ ಆಸೆಪಡದೇ ಪ್ರಾಮಾಣಿಕತೆಗೆ ಬೆಲೆಕೊಟ್ಟ ಬಸ್ ಚಾಲಕ ನಿರ್ವಾಹಕರು ಮಾದರಿಯಾಗಿದ್ದಾರೆ.
ಪ್ರಯಾಣಿಕರೊಬ್ಬರು ಬಸ್ನಲ್ಲಿ ಬಿಟ್ಟು ಹೋಗಿದ್ದ ಆಭರಣ ಹಾಗೂ ನಗದು ಇದ್ದ ಬ್ಯಾಗ್ನ್ನು ಚಾಲಕ ಹಾಗೂ ನಿರ್ವಾಹಕರು ಮರಳಿಸಿದ್ದಾರೆ.
ಮೇ.29 ರ ಚಿಕ್ಕಮಗಳೂರು-ಕಾರವಾರ ಬಸ್ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದರು. ಅದರಲ್ಲಿ 3.50 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, ಹಾಗೂ 1 ಲಕ್ಷ ರೂ.ನಗದು, ಮೊಬೈಲ್ ಮುಂತಾದ ವಸ್ತುಗಳಿದ್ದವು. ಅದನ್ನು ಗಮನಿಸಿದ ನಿರ್ವಾಹಕ ಹರೀಶ ಎಚ್. ಹಾಗೂ ಚಾಲಕ ಸ್ಟೀಫನ್ ಫರ್ನಾಂಡಿಸ್ ಅವರು ಅದನ್ನು ಪೊಲೀಸರಿಗೆ ತಿಳಿಸಿ, ಪ್ರಯಾಣಿಕರಿಗೆ ಮರಳಿಸಿದ್ದಾರೆ. ಘಟಕ ವ್ಯವಸ್ಥಾಪಕಿ ಸೌಮ್ಯಾ ನಾಯಕ ಅವರ ಸಮ್ಮುಖದಲ್ಲಿ ಅದನ್ನು ಹಸ್ತಾಂತರ ಮಾಡಲಾಯಿತು.