ಹೊನ್ನಾವರ Bus accident : ತಾಲೂಕಿನ ಗೇರಸೊಪ್ಪಾ ಸಮೀಪ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಸೂಳೆಮುರ್ಕಿ ತಿರುವಿನಲ್ಲಿ ಸಾರಿಗೆ ಇಲಾಖೆಯ ಬಸ್ಸು ಹೆದ್ದಾರಿ ಪಕ್ಜದ ಗುಡ್ಡಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಸಾಗರದಿಂದ ಹೊನ್ನಾವರಕ್ಕೆ ಬರುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಢಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ 49 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಪದೇಪದೇ ಅಪಘಾತ
ಸುಳೆಮುರ್ಕಿ ತಿರುವಿನಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತದೆ. ಮಾವಿನಗುಂಡಿಯಿಂದ ಘಟ್ಟ ಇಳಿದು ಹೊನ್ನಾವರದಬಕಡೆಗೆ ಬರುವಾಗ ಈ ಅಪಾಯಕಾರಿ ತಿರುವಿನಲ್ಲಿ ವಾಹನಗಳು ಪಲ್ಟಿಯಾಗುತ್ತವೆ.
ಧರೆಗೆ ಗುದ್ದಿಕೊಳ್ಳುತ್ತವೆ. ಕಳೆದ ಒಂದು ತಿಂಗಳನಲ್ಲಿ ಈ ಜಾಗದಲ್ಲಿ ನಾಲ್ಕು ಅಪಘಾತ ಪ್ರಕರಣ ಸಂಭವಿಸಿವೆ. ಹಲವಾರು ಜನರು ಗಾಯಗೊಂಡಿದ್ದರು. ಈ ಅಪಘಾತ ಸ್ಥಳವನ್ನು ಸುಗಮಗೊಳಿಸಲು ಆಗ್ರಗಳು ಕೇಳಿ ಬರುತ್ತಲೇ ಇವೆ.
ಆದರೆ ಸಂಬಂಧ ಪಟ್ಟ ಇಲಾಖೆ ಸಮರ್ಪಕವಾದ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸುಳಿಮುರ್ಕಿ ತಿರುವಿನಲ್ಲಿ ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ.