ಮೃತಪಟ್ಟಿದ್ದಕ್ಕೆ ಸಿಕ್ಕ ಪರಿಹಾರ ಧನದ ಮೇಲೆ ಕಣ್ಣಿಟ್ಟ ದುಷ್ಕರ್ಮಿಗಳು, ಬಾಲಕಿಯನ್ನು ಅಪಹರಿಸಿ ಕೊಂದು, ಶವ ಹೊಲಕ್ಕೆಸೆದರು!

ಉತ್ತರಪ್ರದೇಶ: ದೇಶದಲ್ಲಿ ಯುವತಿಯೊಬ್ಬಳನ್ನು ಕೊಂದು ತುಂಡುತುಂಡಾಗಿ ಕತ್ತರಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಕ್ರೂರ ಹಾಗೂ ಪೈಶಾಚಿಕ ಕೃತ್ಯವೊಂದು ನಡೆದಿದೆ. ವ್ಯಕ್ತಿಯೊಬ್ಬರಿಗೆ ಮಗ ಅಪಘಾತದಲ್ಲಿ ಮೃತನಾಗಿದ್ದಕ್ಕೆ ಸರ್ಕಾರದಿಂದ ಬಂದಿದ್ದ ಪರಿಹಾರ ಧನದ ಮೇಲೆ ಕಣ್ಣಿಟ್ಟ ದುಷ್ಕರ್ಮಿಗಳು ಅವರ ಮೊಮ್ಮಗಳನ್ನು ಅಪಹರಿಸಿ, ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಾತ್ರವಲ್ಲ, ಬಳಿಕ ಆಕೆಯನ್ನು ಕೊಂದು ಶವ ಎಸೆದಿದ್ದರು. ಉತ್ತರಪ್ರದೇಶದ ಗಾಜಿಯಾಬಾದ್​ನ ಬುಲಂದ್​ಷಹರ್​ನಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಸೋನು ಎಂಬವರ 12 ವರ್ಷದ ಪುತ್ರಿ ಖುಷಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಂದು, ಬಳಿಕ … Continue reading ಮೃತಪಟ್ಟಿದ್ದಕ್ಕೆ ಸಿಕ್ಕ ಪರಿಹಾರ ಧನದ ಮೇಲೆ ಕಣ್ಣಿಟ್ಟ ದುಷ್ಕರ್ಮಿಗಳು, ಬಾಲಕಿಯನ್ನು ಅಪಹರಿಸಿ ಕೊಂದು, ಶವ ಹೊಲಕ್ಕೆಸೆದರು!