ಅಂಧರ ಟಿ20 ವಿಶ್ವಕಪ್​; ಕೊಪ್ಪಳದ ಯುವಕನಿಗೆ ತಂಡದಲ್ಲಿ ಸ್ಥಾನ

ಕೊಪ್ಪಳ: ಜಿಲ್ಲೆಯಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಅದರಲ್ಲೂ ಇಲ್ಲಿನವರು ಕ್ರೀಡೆಗಳಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ್ದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಗಂಗಾವತಿಯ ಚಿಕ್ಕಬೆಣಕಲ್ ಗ್ರಾಮದ ಯುವಕನೊಬ್ಬ ಅಂಧರ ಟಿ20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾನೆ. ಹೌದು. ಗಂಗಾವತಿ ಮೂಲದ ಲೋಕೇಶ್ ಡಿಸೆಂಬರ್ 6 ರಂದು ನಡೆಯಲಿರುವ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದು ಟಿ20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಲೋಕೇಶ್ ದೃಷ್ಟಿಹೀನರಾಗಿದ್ದು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎ ಪೂರ್ಣಗೊಳಿಸಿದ್ದಾರೆ. ಲೋಕೆಶ್ ಕರ್ನಾಟಕದ ಅಂಧರ ಟೀಮ್​ನ ಅತ್ಯಾಕರ್ಷಕ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಅತ್ಯುತ್ತಮ ಫೀಲ್ಡರ್‌ ಕೂಡ ಆಗಿದ್ದಾರೆ. … Continue reading ಅಂಧರ ಟಿ20 ವಿಶ್ವಕಪ್​; ಕೊಪ್ಪಳದ ಯುವಕನಿಗೆ ತಂಡದಲ್ಲಿ ಸ್ಥಾನ