ಬಳ್ಳಾರಿಯಲ್ಲಿಂದು ಬಿಜೆಪಿ ನವಶಕ್ತಿ ದರ್ಶನ: ಎಸ್​ಟಿ ಮೋರ್ಚಾ ಸಮಾವೇಶ; ನಡ್ಡಾ ಸೇರಿ ಹಲವರು ಭಾಗಿ

ಬೆಂಗಳೂರು/ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಮೋರ್ಚಾಗಳ ಸಮಾವೇಶಗಳ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನವನ್ನು ಆಡಳಿತಾರೂಢ ಬಿಜೆಪಿ ಮುಂದುವರಿಸಿದೆ. ಗಣಿನಾಡು ಬಳ್ಳಾರಿಯಲ್ಲಿ ಭಾನುವಾರ ಆಯೋಜಿಸಿರುವ ಎಸ್​ಟಿ ನವ ಶಕ್ತಿ ಸಮಾವೇಶಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಘಟಾಘಟಿ ನಾಯಕರು ಧಾವಿಸುತ್ತಿದ್ದಾರೆ. ಸಮಾವೇಶದ ಮೂಲಕ ಚುನಾವಣಾ ಕಹಳೆ ಮೊಳಗಿಸುವ ಸಾಧ್ಯತೆಯಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಜನಸಂಕಲ್ಪ ಯಾತ್ರೆ ನಡೆಸಿದ ಬೆನ್ನಲ್ಲೇ ಮೋರ್ಚಾಗಳ ಸಮಾವೇಶಕ್ಕೆ ಬಿಜೆಪಿ ಕೈಹಾಕಿದೆ. ಅಕ್ಟೋಬರ್ 29 ರಂದು ಕಲಬುರಗಿಯಲ್ಲಿ … Continue reading ಬಳ್ಳಾರಿಯಲ್ಲಿಂದು ಬಿಜೆಪಿ ನವಶಕ್ತಿ ದರ್ಶನ: ಎಸ್​ಟಿ ಮೋರ್ಚಾ ಸಮಾವೇಶ; ನಡ್ಡಾ ಸೇರಿ ಹಲವರು ಭಾಗಿ