ಯತ್ನಾಳರಿಂದ ಬಿಜೆಪಿಗೆ ಕಿಂಚಿತ್ ಲಾಭವಿಲ್ಲ; ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

APPU PATTANASHETTI

ವಿಜಯಪುರ: ಬಸನಗೌಡ ಪಾಟೀಲ ಯತ್ನಾಳರಿಂದ ಬಿಜೆಪಿಗೆ ಹಾನಿಯಾಗಿದೆ ವಿನಃ ಕಿಂಚಿತ್ ಲಾಭವಾಗಿಲ್ಲ. ಹೀಗಾಗಿ ಇದೀಗ ಅವರ ಉಚ್ಚಾಟನೆಯಿಂದಲೂ ಯಾವುದೇ ಹಾನಿಯಾಗಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರತಿಕ್ರಿಯಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳರ ನಡವಳಿಕೆಯೇ ಅವರಿಗೆ ಮುಳುವಾಗಿದೆ. ಈ ಹಿಂದೆ ನನಗೆ ಟಿಕೆಟ್ ಸಿಕ್ಕಾಗಲೂ ಚುನಾವಣೆ ಮಾಡಲಿಲ್ಲ. ಅವರ ತಾತ್ಸಾರ, ಅಸೂಯೆ, ಹೊಟ್ಟೆಕಿಚ್ಚಿನ ಗುಣವೇ ಅವರನ್ನಿಂದು ಕಾಡುತ್ತಿದೆ. ಅವರು ಮಾಡಿರುವ ತಪ್ಪುಗಳೇ ಅವರಿಗೆ ಮುಳುವಾಗಿವೆ ಎಂದರು.

ಯತ್ನಾಳರ ಉಚ್ಚಾಟನೆಯಿಂದ ಬಿಜೆಪಿಗೆ ಖಂಡಿತ ಹಾನಿಯಾಗಲ್ಲ. ಇವರೇ 5-6 ಸಾವರಿ ಅಂತರಗಳಿಂದ ಗೆಲುವು ಸಾಧಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಹೀಗಾಗಿ ಇವರಿಂದ ಕಿಂಚತ್ ಲಾಭವಾಗಿಲ್ಲ ಎಂದರಲ್ಲದೇ ನಾನಂತೂ ಪಕ್ಷಕ್ಕೆ ಪ್ರಾಮಾಣಿಕವಾಗಿದ್ದೇನೆ. ಟಿಕೆಟ್ ಸಿಗದೇ ಇದ್ದಾಗಲೂ ಪಕ್ಷದಲ್ಲಿದ್ದೇನೆ. ಪಕ್ಷದಲ್ಲಿಯೇ ಇರುತ್ತೇನೆ. ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುತ್ತೇವೆ ಎಂದು ತಿಳಿಸಿದರು.

Share This Article

ಬೆಲ್ಲ ಆರೋಗ್ಯವನ್ನಷ್ಟೇ ಅಲ್ಲ ಸೌಂದರ್ಯವನ್ನೂ ವೃದ್ಧಿಸುತ್ತದೆ! ಇದು ನಿಮಗೆ ಗೊತ್ತಾ? jaggery benefits

jaggery benefits: ಹುಡುಗಿಯರು ಸಾಮಾನ್ಯವಾಗಿ ಸೌಂದರ್ಯದ ವಿಷಯದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ…

ಕನಸಿನಲ್ಲಿ ಯಾರದೋ ಸಾವನ್ನು ಕಂಡರೆ ಶುಭವಂತೆ!; ಇತರ ಕೆಟ್ಟ ಕನಸುಗಳ ಶುಭ ಅರ್ಥ ತಿಳಿಯಿರಿ.. | Auspicious

Auspicious : ಸಾಮಾನ್ಯವಾಗಿ ರಾತ್ರಿ ನಿದ್ದೆ ಮಾಡುತ್ತಿರವಾಗ ಅನೇಕ ಕನಸುಗಳು ಕಾಣುತ್ತೇವೆ. ಇದರಲ್ಲಿ ಕೆಲ ಕನಸುಗಳು…

ಮನೆಯ ಮುಖ್ಯ ದ್ವಾರದಲ್ಲಿ ನಿಂತಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..Vastu Tips

Vastu Tips: ಮನೆಯ ಮುಖ್ಯ ದ್ವಾರವನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ…