ಬೆಂಗಳೂರು: ಕೇಂದ್ರದಲ್ಲಿ ಸಚಿವರಾಗಿದ್ದ ಅನಂತಕುಮಾರ್ ಅವರ ನಿಧನದಿಂದ ತೆರವಾಗಿರುವ ರಾಜ್ಯ ಕೋರ್ ಕಮಿಟಿಯ ಸದಸ್ಯ ಸ್ಥಾನ ತುಂಬುವ ವಿಚಾರವಾಗಿ ಬಿಜೆಪಿಯಲ್ಲಿ ಹಗ್ಗಜಗ್ಗಾಟ ಏರ್ಪಟ್ಟಿದೆ.
ತಮ್ಮ ಆಪ್ತರಾದ ಶೋಭಾ ಕರಂದ್ಲಾಜೆ ಅಥವಾ ಶ್ರೀರಾಮುಲು ಅವರಿಗೆ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲು ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಸಮಿತಿ ಸೇರಲು ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಶತಪ್ರಯತ್ನ ನಡೆಸುತ್ತಿದ್ದರೆ.
ಶೋಭಾ ಕರಂದ್ಲಾಜೆ ಅವರನ್ನು ಕೋರ್ ಕಮಿಟಿಗೆ ಸೇರಿಸಿಕೊಳ್ಳಲು ಪಕ್ಷದಲ್ಲಿ ವಿರೋಧವಿದೆ ಎನ್ನಲಾಗಿದೆ. ಹಾಗೊಂದು ವೇಳೆ ವಿರೋಧ ತೀವ್ರಗೊಂಡರೆ ಶೋಭಾ ಬದಲಿಗೆ ಶ್ರೀರಾಮುಲು ಅವರಿಗೆ ಸ್ಥಾನ ಕಲ್ಪಿಸುವುದು ಯಡಿಯೂರಪ್ಪ ಅವರ ಉದ್ದೇಶ. ಈ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಮತ್ತಷ್ಟು ಪ್ರಾಮುಖ್ಯತೆ ನೀಡುವುದು ಈ ಉದ್ದೇಶದ ಹಿಂದನ ತಂತ್ರ ಎನ್ನಲಾಗಿದೆ. ಆದರೆ, ಶತಾಯಗತಾಯ ಕೋರ್ ಕಮಿಟಿಗೆ ಸೇರುವ ಹಟಕ್ಕೆ ಬಿದ್ದಿರುವ ಸಚಿವ ಅನಂತ್ಕುಮಾರ್ ಹೆಗಡೆ, ಕೇಂದ್ರದ ನಾಯಕರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಹೆಗಡೆ ಅವರಿಗೆ ಸ್ಥಾನ ನೀಡುವ ವಿಚಾರವಾಗಿಯೂ ಬಿಜೆಪಿಯಲ್ಲಿ ವಿರೋಧಗಳಿವೆ ಎನ್ನಲಾಗಿದೆ.
11 ಸದಸ್ಯರಿರುವ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಸದ್ಯ ಅನಂತ್ಕುಮಾರ್ ಅವರ ನಿಧನದಿಂದ ಒಂದು ಸ್ಥಾನ ತೆರವಾಗಿದೆ.
AnanthKumar hegdeBJP Core CommitteeBJP HighCommandBJP State PresidentBS YeddyurappaCompetitionMemberShobha KarandlajeSriramuluಅನಂತ್ಕುಮಾರ್ ಹೆಗಡೆಪೈಪೋಟಿಬಿ. ಎಸ್. ಯಡಿಯೂರಪ್ಪಬಿಜೆಪಿ ಕೋರ್ ಕಮಿಟಿಬಿಜೆಪಿ ರಾಜ್ಯಾಧ್ಯಕ್ಷಶೋಭಾ ಕರಂದ್ಲಾಜೆಶ್ರೀರಾಮುಲುಸದಸ್ಯ ಸ್ಥಾನಹೈಕಮಾಂಡ್