ನನ್ನ ತಂದೆ ಯಡಿಯೂರಪ್ಪ ಸುತ್ತಲೂ ಹಾವು-ಚೇಳುಗಳೇ ಇವೆ: ಮಾರ್ಮಿಕವಾಗಿ ನುಡಿದ ವಿಜಯೇಂದ್ರ

ಮೈಸೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರ ಸುತ್ತಲೂ ಹಾವು ಮತ್ತು ಚೇಳುಗಳಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾರ್ಮಿಕವಾಗಿ ಹೇಳಿದರು. ನಗರದ ಜೆಎಸ್​ಎಸ್​ ಬಡಾವಣೆಯಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ, ನಮ್ಮ ತಂದೆ (ಬಿಎಸ್​ವೈ)ಗೆ ಸಮಸ್ಯೆಗಳೇನೂ ಹೊಸದಲ್ಲ, ವಿಶೇಷವೂ ಅಲ್ಲ. ಅವರು ಇಡೀ ರಾಜಕೀಯ ಜೀವನವನ್ನು ಹೋರಾಟದ ಮೂಲಕ ಕಟ್ಟಿಕೊಂಡಿದ್ದಾರೆ. ಆದರೀಗ ಅವರ ಸುತ್ತಲು ಹಾವು-ಚೇಳುಗಳೇ ತುಂಬಿವೆ. ಆದರೂ ಅವುಗಳ ಮಧ್ಯೆದಲ್ಲೇ ವಾಸವಿದ್ದು, ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ … Continue reading ನನ್ನ ತಂದೆ ಯಡಿಯೂರಪ್ಪ ಸುತ್ತಲೂ ಹಾವು-ಚೇಳುಗಳೇ ಇವೆ: ಮಾರ್ಮಿಕವಾಗಿ ನುಡಿದ ವಿಜಯೇಂದ್ರ