ಕುಂದಾಪುರ: ಕೋಡಿ ಬಿಲ್ಲವ ಸಮಾಜ ಸೇವಾ ಸಂಘದ ದಶಮ ಸಂಭ್ರಮ-2025 ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕುಂದಾಪುರ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಉದ್ಘಾಟಿಸಿದರು. ಕೋಡಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಗಂಗಾಧರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸಾಧಕರನ್ನು ಗೌರವಿಸಲಾಯಿತು ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ರಾಷ್ಟ್ರೀಯ ಮಹಿಳಾ ಮಂಡಳಿ ಉಡುಪಿ ಘಟಕ ಅಧ್ಯಕ್ಷೆ ಗೀತಾಂಜಲಿ ಎಂ.ಸುವರ್ಣ, ವಿವೇಕ ಬಾಲಕಿಯರ ಪ್ರೌಢಶಾಲಾ ಪ್ರಾಧ್ಯಾಪಕ ನರೇಂದ್ರ ಕುಮಾರ್ ಕೋಟ, ಕೋಡಿ ಶಂಕರ್ ಪೂಜಾರಿ, ಗೋಪಾಲ್ ಪೂಜಾರಿ, ಚಂದ್ರ ಎಸ್., ಲಕ್ಷ್ಮೀ ಗೋಪಾಲ್ ಪೂಜಾರಿ, ಸುರೇಖಾ ಮಧುಕರ್ ಪೂಜಾರಿ, ರಾಘವೇಂದ್ರ ಪೂಜಾರಿ, ಕಮಲಾ ಮಂಜುನಾಥ್ ಪೂಜಾರಿ, ಬೇಬಿ ಮಂಜುನಾಥ್ ಪೂಜಾರಿ, ಬೇಬಿ ಪೂಜಾರಿ, ಆನಂದ್ ಮಾಸ್ಟರ್ ಉಪಸ್ಥಿತರಿದ್ದರು.
ಕೋಡಿ ಯೋಗೀಶ್ ಪೂಜಾರಿ ಸ್ವಾಗತಿಸಿದರು, ಕೋಡಿ ಸುನೀಲ್ ಪೂಜಾರಿ ವಂದಿಸಿದರು.