ಪಟನಾ: ಬಿಹಾರ ವಿಧಾನಸಭಾ ಚುನಾವಣಾ ಕಾವು ದಿನೇದಿನೆ ಹೆಚ್ಚಾಗುತ್ತಿದ್ದು, ಆರ್ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾಮೈತ್ರಿಯು ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಹಾರದಲ್ಲಿ ಮೈತ್ರಿಯ ನಾಯಕ ಆರ್ಜೆಡಿಯ ತೇಜಸ್ವಿ ಯಾದವ್ ಪ್ರಣಾಳಿಕೆ ಲೋಕಾರ್ಪಣೆ ಮಾಡಿದ್ರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಣ್ದೀಪ್ ಸಿಂಗ್ ಸುರ್ಜೇವಾಲಾ, ಶಕ್ತಿಸಿನ್ಹ್ ಗೋಹಿಲ್ ಮತ್ತು ಇತರೆ ನಾಯಕರು ಹಾಜರಿದ್ದರು.
ಬಿಹಾರದಲ್ಲಿನ 10 ಲಕ್ಷ ಯುವಜನರಿಗೆ ಉದ್ಯೋಗ ಒದಗಿಸುವ ಭರವಸೆಯೂ ಸೇರಿ ಕೆಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪ್ರಮುಖ ಅಂಶವೂ ಇದಾಗಿದೆ. ಇತರೆ ಅಂಶಗಳ ಪೈಕಿ ಕೃಷಿ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವುದು, ಪರೀಕ್ಷಾ ಶುಲ್ಕ ಮನ್ನಾ, ವಿದ್ಯುತ್ ಉತ್ಪಾದನೆ ಹೆಚ್ಚಿಸುವುದು ಮುಂತಾದವುಗಳು ಪ್ರಮುಖವಾದವು.
ಇದನ್ನೂ ಓದಿ: PHOTOS| ಮೈಸೂರು ದಸರಾ 2020ರ ಉದ್ಘಾಟನಾ ಸಮಾರಂಭದ ಚಿತ್ರಣ
ವಿಧಾನಸಭೆ ಚುನಾವಣೆ ಇಲ್ಲಿ ಮೂರು ಹಂತದಲ್ಲಿ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಅಕ್ಟೋಬರ್ 28, ಎರಡನೇ ಹಂತ ನವೆಂಬರ್ 3, ಮೂರನೇ ಹಂತ ನವೆಂಬರ್ 7 ರಂದು ನಡೆಯಲಿದೆ. (ಏಜೆನ್ಸೀಸ್)
10 ರೂಪಾಯಿ ಕೊಟ್ರೆ ಸಾಕು, ಲುಂಗಿ, ಧೋತಿ, ಸೀರೆ ಕೊಡುತ್ತೆ ಜಾರ್ಖಂಡ್ ಸರ್ಕಾರ!