More

    ಡಿಜೆ ಧ್ವನಿವರ್ಧಕ ವಿಚಾರವಾಗಿ ಎರಡು ಸಮುದಾಯದ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಬಲಿ

    ಬೀದರ್ : ಎರಡು ಸಮುದಾಯಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ಭಾಲ್ಕಿ ತಾಲೂಕಿನ ಸಿಕಂದ್ರಾಬಾದ್​ ವಾಡಿ ಗ್ರಾಮದಲ್ಲಿ ನಡೆದಿದೆ.


    ಡಿಜೆ ಧ್ವನಿವರ್ಧಕ ವಿಚಾರವಾಗಿ ನಡೆದ ಜಗಳದಲ್ಲಿ ಜರ್ರೆಪ್ಪ ಎಂಬುವರನ್ನು ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
    ಹೊಸ ವರ್ಷದಂದು ಬೈಕ್​ ರಿಪೇರಿ ಅಂಗಡಿ ಉದ್ಘಾಟನೆಗಾಗಿ ಗ್ರಾಮದಲ್ಲಿ ಡಿಜೆ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿತ್ತು.

    ಈ ವಿಚಾರವಾಗಿ ಗ್ರಾಮದಲ್ಲಿರುವ 2 ಸಮುದಾಯಗಳ ನಡುವೆ ಜಗಳ ಆರಂಭವಾಯಿತು. ಜಗಳ ಹಿಂಸೆಗೆ ತಿರುಗಿತು. ಹಲ್ಲೆಯಿಂದ ತೀವ್ರ ಗಾಯಗೊಂಡು ಓರ್ವ ಮೃತಪಟ್ಟ. ಕೂಡಲೇ ಪೊಲೀಸರು ಗ್ರಾಮಕ್ಕೆ ಆಗಮಿಸಿ ಮಾರಾಮರಿ ತಪ್ಪಿಸಿದರು.


    ಗ್ರಾಮದಲ್ಲಿ ಉದ್ರಿಕ್ತ ಸ್ಥಿತಿ ಇದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಖಟಕಚಿಂಚೋಳಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts