More

    ಭರಮಸಾಗರ ಗ್ರಾಪಂಗೆ ಶ್ರೀನಿವಾಸ್ ಅಧ್ಯಕ್ಷ

    ಭರಮಸಾಗರ: ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    26 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದ ಸಂತೋಷ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಜ.10ರಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಹನುಮಂತಪ್ಪ ನಾಮಪತ್ರ ಸಲ್ಲಿಸಿದ್ದರು.

    ನಂತರ ನಡೆದ ಚುನಾವಣೆಯಲ್ಲಿ 4 ಮತ ಅಂತರದಿಂದ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾಪಂ ಇಒ ಕೃಷ್ಣಾನಾಯಕ ಘೋಷಿಸಿದರು.

    ನೂತನ ಅಧ್ಯಕ್ಷ ಶ್ರೀವಾಸ್ ಮಾತನಾಡಿ, ಸದಸ್ಯರು ನನ್ನ ಮೇಲೆ ಭರವಸೆ ಇಟ್ಟು ಮತ ನೀಡಿ ಆಯ್ಕೆಮಾಡಿದ್ದಾರೆ. ಅವರ ನಂಬಿಕೆ ದ್ರೋಹವಾಗದಂತೆ ಪಕ್ಷಭೇದ ಮರೆತು ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

    ಕಾಂಗ್ರೆಸ್ ಮುಖಂಡರಾದ ಎಚ್.ಎನ್. ತಿಪ್ಪೇಸ್ವಾಮಿ, ಹನುಮಂತಪ್ಪ, ಟಿ.ಎಸ್. ಮಲ್ಲೇಶ್, ನಿರಂಜನ್, ಸೈಟ್ ಮಂಜುನಾಥ್, ಪಿಎಸ್‌ಐ ರಾಜು, ಪಿಡಿಒ ಶ್ರೀದೇವಿ, ಇ.ಒ. ಕೃಷ್ಣಾನಾಯ್ಕಾ ಹಾಗೂ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts