More

    ಭಜರಂಗಿ-2 ಚಿತ್ರಕ್ಕೆ ಮತ್ತೆ ಎದುರಾದ ಕಂಟಕ: ಮೊನ್ನೆ ಬೆಂಕಿ, ನಿನ್ನೆ ಅಪಘಾತ ಇಂದು….

    ಬೆಂಗಳೂರು: ನಟ ಶಿವರಾಜ್​ಕುಮಾರ್​ ಅಭಿನಯದ “ಭಜರಂಗಿ-2” ಚಿತ್ರ ಸೆಟ್ಟೇರಿ ಸಿನಿಮಾ ಫಸ್ಟ್​ ಫೋಸ್ಟರ್​ ಬಿಡುಗಡೆಯಾದ ದಿನದಿಂದ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ.

    ಚಿತ್ರೀಕರಣಕ್ಕಾಗಿ ನೆಲಮಂಗಲ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರತಂಡ ಬೃಹತ್​ ಸೆಟ್​ ನಿರ್ಮಿಸಿದೆ. ಬೃಹತ್ ಪ್ರಮಾಣದಲ್ಲಿ ಹಾಕಲಾಗಿದ್ದ ಗುಹೆಯ ಸೆಟ್​ಗೆ ಮೂರು ದಿನಗಳ ಹಿಂದಷ್ಟೇ ಬೆಂಕಿ ಬಿದ್ದಿತ್ತು. ಅದೃಷ್ಟವಶಾತ್​ ಯಾರಿಗೂ ಏನೂ ಆಗಿರಲಿಲ್ಲ.

    ನಿನ್ನೆಯಷ್ಟೇ ಮೋಹನ್​ ಬಿ ಕೆರೆ ಸ್ಟುಡಿಯೋಗೆ ಬೆಂಗಳೂರಿನಿಂದ ಕಲಾವಿದರು ಸಂಚರಿಸುತ್ತಿದ್ದ ಬಸ್,​ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್​ ಕಂಬಕ್ಕೆ ಅಪ್ಪಳಿಸಿ ನಿಂತಿತ್ತು. ಬಸ್​ ಅಪ್ಪಳಿಸಿದ ರಭಸಕ್ಕೆ ವಿದ್ಯುತ್​ ಕಂಬ ಹಾಗೂ ವಿದ್ಯುತ್​​ ತಂತಿ ತುಂಡಾಗಿ ಬಸ್​ ಮೇಲೆ ಬಿದ್ದಿತ್ತು. ಎರಡನೇ ಬಾರಿಯೂ ಪ್ರಾಣಾಪಾಯದಿಂದ ಅಲ್ಪದರದಲ್ಲೇ ಕಲಾವಿದರು ಪಾರಾಗಿದ್ದರು.

    ಇದೀಗ ಚಿತ್ರತಂಡ ಮತ್ತೊಮ್ಮೆ ಅವಘಡವನ್ನು ಎದುರಿಸಿದೆ. ಸೆಟ್​ಗೆ ಇಂದು ಮತ್ತೆ ಬೆಂಕಿ ಬಿದ್ದಿದ್ದು, ಇದರಿಂದ ಸೆಟ್​ ಸಂಪೂರ್ಣ ಸುಟ್ಟುಹೋಗಿದೆ. ಈ ಬಾರಿಯು ಚಿತ್ರತಂಡ ಅವಘಡದಿಂದ ಪಾರಾಗಿದೆ. ಅಂದಹಾಗೆ ಭಜರಂಗಿ ಚಿತ್ರ ನಿರ್ದೇಶಿಸಿದ್ದ ಹರ್ಷ ಅವರೇ ಭಜರಂಗಿ-2 ನಿರ್ದೇಶನ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts