ಬೆಂಗಳೂರು: ನಟ ಶಿವರಾಜ್ಕುಮಾರ್ ಅಭಿನಯದ “ಭಜರಂಗಿ-2” ಚಿತ್ರ ಸೆಟ್ಟೇರಿ ಸಿನಿಮಾ ಫಸ್ಟ್ ಫೋಸ್ಟರ್ ಬಿಡುಗಡೆಯಾದ ದಿನದಿಂದ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ.
ಚಿತ್ರೀಕರಣಕ್ಕಾಗಿ ನೆಲಮಂಗಲ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರತಂಡ ಬೃಹತ್ ಸೆಟ್ ನಿರ್ಮಿಸಿದೆ. ಬೃಹತ್ ಪ್ರಮಾಣದಲ್ಲಿ ಹಾಕಲಾಗಿದ್ದ ಗುಹೆಯ ಸೆಟ್ಗೆ ಮೂರು ದಿನಗಳ ಹಿಂದಷ್ಟೇ ಬೆಂಕಿ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಏನೂ ಆಗಿರಲಿಲ್ಲ.
ನಿನ್ನೆಯಷ್ಟೇ ಮೋಹನ್ ಬಿ ಕೆರೆ ಸ್ಟುಡಿಯೋಗೆ ಬೆಂಗಳೂರಿನಿಂದ ಕಲಾವಿದರು ಸಂಚರಿಸುತ್ತಿದ್ದ ಬಸ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ನಿಂತಿತ್ತು. ಬಸ್ ಅಪ್ಪಳಿಸಿದ ರಭಸಕ್ಕೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿ ತುಂಡಾಗಿ ಬಸ್ ಮೇಲೆ ಬಿದ್ದಿತ್ತು. ಎರಡನೇ ಬಾರಿಯೂ ಪ್ರಾಣಾಪಾಯದಿಂದ ಅಲ್ಪದರದಲ್ಲೇ ಕಲಾವಿದರು ಪಾರಾಗಿದ್ದರು.
ಇದೀಗ ಚಿತ್ರತಂಡ ಮತ್ತೊಮ್ಮೆ ಅವಘಡವನ್ನು ಎದುರಿಸಿದೆ. ಸೆಟ್ಗೆ ಇಂದು ಮತ್ತೆ ಬೆಂಕಿ ಬಿದ್ದಿದ್ದು, ಇದರಿಂದ ಸೆಟ್ ಸಂಪೂರ್ಣ ಸುಟ್ಟುಹೋಗಿದೆ. ಈ ಬಾರಿಯು ಚಿತ್ರತಂಡ ಅವಘಡದಿಂದ ಪಾರಾಗಿದೆ. ಅಂದಹಾಗೆ ಭಜರಂಗಿ ಚಿತ್ರ ನಿರ್ದೇಶಿಸಿದ್ದ ಹರ್ಷ ಅವರೇ ಭಜರಂಗಿ-2 ನಿರ್ದೇಶನ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)