ಉತ್ತಮ ಅಂಕಗಳಿಸಿ ಉನ್ನತ ಸ್ಥಾನ ಪಡೆಯಿರಿ

blank

ಕವಿತಾಳ: ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಕಠಿಣ ಪರಿಶ್ರಮದಿಂದ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಶಿಕ್ಷಕ ಶರಣಬಸವ ಹೇಳಿದರು.

ಇದನ್ನೂ ಓದಿ: ಗುರುಗಳು ತೋರಿದ ಮಾರ್ಗದಿಂದ ಉತ್ತಮ ಸ್ಥಾನ

ಸಮೀಪದ ಹಾಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರ ಮಾತನ್ನು ಚಾಚೂ ತಪ್ಪದೆ ಪಾಲಿಸಬೇಕು.

ಪಾಲಕರ ಪಾದಪೂಜೆ ಮೂಲಕ ಅವರ ಹರ್ಷಕ್ಕೆ ಕಾರಣರಾಗಿದ್ದಿರಿ. ಮುಂದಿನ ದಿನದಲ್ಲಿ ಉತ್ತಮ ಅಂಕ ಪಡೆದು ಉನ್ನತ ಸ್ಥಾನ ಪಡೆಯುವಂತಾಗಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಯಂಕೋಬ ದೇವಪುರ ಮಾತನಾಡಿ, ಕಳೆದ ವರ್ಷ ಶಾಲೆ ಉತ್ತಮ ಫಲಿತಾಂಶ ಪಡೆದಿತ್ತು.

ಈ ಬಾರಿಯು ಉತ್ತಮ ಅಂಕ ಪಡೆದು ಶಾಲೆ, ಪಾಲಕರಿಗೆ ಕೀರ್ತಿ ತರಬೇಕು ಎಂದರು. ಬಳಿಕ ವಿದ್ಯಾರ್ಥಿನಿಯರಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ನಡೆಯಿತು. ಜಂಗಮರಹಳ್ಳಿಯ ದಂಡಗುಂಡಪ್ಪ ತಾತ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಕವಿ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುಭಾಸ್‌ಸಿಂಗ್,

ಪ್ರಾಚಾರ್ಯ ಚನ್ನಬಸಪ್ಪ, ಪಾಲಕರಾದ ರಮೇಶ, ಶರಣಮ್ಮ, ಸಿಬ್ಬಂದಿ ರೇವಣಸಿದ್ದಪ್ಪ, ವೆಂಕಟೇಶ, ವೀರಯ್ಯ, ಶರಣಬಸವ, ಶರಣಮ್ಮ, ಸುನೀತಾ, ಅಚ್ಚಮ್ಮ, ಶಾಂತಮ್ಮ, ರತ್ನಮ್ಮ, ವಿದ್ಯಾಶ್ರೀ, ಸೌಮ್ಯಾ, ಉಪನ್ಯಾಸಕ ಸಿದ್ಧಾರ್ಥ ಪಾಟೀಲ್ ಇತರರಿದ್ದರು.

Share This Article

ಅತಿಯಾಗಿ ತಿನ್ನುವುದರಿಂದ ಬೊಜ್ಜು ಹೆಚ್ಚಾಗುವುದಿಲ್ಲ; ಈ ಕಾರಣಗಳೇ ಅದಕ್ಕೆ ಮೂಲ ಕಾರಣ | Health Tips

ಬೊಜ್ಜು ವೇಗವಾಗಿ ಬೆಳೆಯುತ್ತಿರುವ ಸಮಸ್ಯೆಯಾಗಿದ್ದು ಇದು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ…

ಹೋಳಿ ಆಚರಿಸುವಾಗ ಗರ್ಭಿಣಿಯರು ಈ ವಿಷಯವನ್ನು ತಿಳಿದಿರಬೇಕು; ಹೆಲ್ತಿ ಟಿಪ್ಸ್​​​ | Health Tips

ಹೋಳಿ ಹಬ್ಬದಲ್ಲಿ ಜನರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಮೋಜು ಮತ್ತು ಆನಂದದಲ್ಲಿ ಮುಳುಗಿರುತ್ತಾರೆ. ಹೋಳಿಯಂದು ಅನೇಕ…

ಹೋಳಿಯ ಹಠಮಾರಿ ಬಣ್ಣ ತೆಗೆಯುವುದೇಗೆ?; ಮುಖ​ & ಕೂದಲಿನ ರಕ್ಷಣೆಗೆ ನೀವಿದನ್ನು ಟ್ರೈಮಾಡಿ | Holi colours

ಬಣ್ಣಗಳೊಂದಿಗೆ ಆಟವಾಡಲು ಯಾರಿಗೆ ಇಷ್ಟವಿಲ್ಲ ಹೇಳಿ? ಹೋಳಿ ಹಬ್ಬ ಬಂದಾಗ ಯಾರಿಗಾದರೂ ಬಣ್ಣ ಬಳಿಯುವ ಅವಕಾಶವನ್ನು…