ಬೆಟ್ಕೊಪ್ಪದ ತುಳಸಿಗೆ ಮದ್ರಾಸ್ ಈಸ್ಟ್ ರೋಟರಿ ಕ್ಲಬ್ ನ ಯಂಗ್ ಅಚೀವರ್ ಅವಾರ್ಡ್

blank

ಶಿರಸಿ: ದೇಶದ ಪ್ರಮುಖ ರೋಟರಿ ಕ್ಲಬ್​ಗಳಲ್ಲಿ ಒಂದಾದ ಮದ್ರಾಸ್ ಈಸ್ಟ್ ರೋಟರಿ ಕ್ಲಬ್ ನೀಡುವ ಪ್ರತಿಷ್ಠಿತ ಯಂಗ ಅಚೀವರ್ ಅವಾರ್ಡ್ 2024 ಅನ್ನು ಯಕ್ಷಗಾನ ಯುವ ಪ್ರತಿಭೆ, ತಾಲೂಕಿನ ಬೆಟ್ಕೊಪ್ಪದ ತುಳಸಿ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.

ಮಕ್ಕಳ ದಿನಾಚರಣೆಯ ಪ್ರಯುಕ್ತ ಬುಧವಾರ ಚೆನ್ನೈನ ಕೊನ್ನೆಮಾರಾದ ತಾಜ್ ಹೋಟೆಲ್​ನಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೆಸರಾಂತ ಭರತನಾಟ್ಯ ಕಲಾವಿದೆ ವಿದೂಷಿ ಮೀನಾಕ್ಷಿ ಚಿತ್ತರಂಜನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯಲ್ಲಿ ಮದ್ರಾಸ್ ಈಸ್ಟ್ ರೋಟರಿ ಕ್ಲಬ್ ಅಧ್ಯಕ್ಷ ರವಿ ವೆಂಕಟ್ರಾಮನಿ, ಪ್ರಶಸ್ತಿ ಪ್ರಾಯೋಜಕ ಮುರುಗವೆಲ್ ಸೆಲ್ವನ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ಸುಜಿತಾ ಅರವಿಂದ ಇದ್ದರು.

ಇದೇ ವೇಳೆ ವಿಶ್ವಶಾಂತಿ ಸರಣಿಯ ಯಕ್ಷನೃತ್ಯ ರೂಪಕವನ್ನು ತುಳಸಿ ಪ್ರಸ್ತುತಗೊಳಿಸಿದಳು. ಕನ್ನಡದ ಕಲೆಯ ಸೊಬಗಿನಲ್ಲಿ ಶ್ರೀ ಕೃಷ್ಣನ ಶಾಂತಿ ಸಂದೇಶದ ಕಥಾಮೃತ ಮೆಚ್ಚುಗೆಗೆ ಪಾತ್ರವಾಯಿತು. ವೆಂಕಟೇಶ ಬೊಗ್ರಿಮಕ್ಕಿ ಪ್ರಸಾದನದಲ್ಲಿ ಸಹಕಾರ ನೀಡಿದರು.

 

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…