More

    ಮಳೆಗಾಲದಲ್ಲಿ ನಿಮ್ಮನ್ನು ಬಾಧಿಸುವ ಸಾಮಾನ್ಯ ಕಾಯಿಲೆಗಳಿಗೆ ಇಲ್ಲಿದೆ ಮನೆಮದ್ದು

    ಬೆಂಗಳೂರು: ಮಳೆ ಶುರುವಾಯಿತೆಂದರೆ ಕೆಲವರಿಗೆ ಎಲ್ಲಿಲ್ಲದ ಭಯ. ಮನೆಯಿಂದ ಹೊರಬರಲು ಇಂದಿನ ಯುವ ಜನರು ಹೆಚ್ಚಾಗಿ ಹಿಂಜರಿಯುತ್ತಾರೆ ಇದಕ್ಕೆ ಮುಖ್ಯ ಕಾರಣಗಳಲ್ಲಿ ರೋಗವೂ ಒಂದು. ಮಳೆಗಾಲದಲ್ಲಿ ರೋಗಗಳು ಕಾಡುವುದು ಸಹಜ. ಮಳೆಯ ಶೀತಲ ವಾತಾವರಣದಿಂದ ಸಾಮಾನ್ಯವಾಗಿ ಶೀತ, ಕಫ, ಕೆಮ್ಮು, ಜ್ವರ ಉಂಟಾಗುತ್ತದೆ. ದೇಹದಲ್ಲಿನ ರೋಗನಿರೋಧಕ ಶಕ್ತಿ ಕಡಿಮೆ ಇರುವುದೇ ಈ ರೋಗಗಳಿಗೆ ಕಾರಣವಾಗಿದ್ದು, ಈ ಕೆಳಗಿನ ಆಹಾರಗಳು ನಮ್ಮ ದೇಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿವೆ.

    ಶುಂಠಿ ಪ್ರತಿನಿತ್ಯ ಬಳಸಬಹುದಾದ ಪದಾರ್ಥವಾಗಿದ್ದು, ಇದರ ಪೇಸ್ಟ್​ ತಯಾರಿಸಿ ಅಡುಗೆ ಮಾಡುವಾಗ ಮತ್ತು ಚಹಾದಲ್ಲಿ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ದಾಳಿಂಬೆಯಲ್ಲಿನ ವಿವಿಧ ಪೋಷಕಾಂಶಗಳು ಹೇರಳವಾಗಿದ್ದು, ದಾಳಿಂಬೆಯ ಸೇವನೆಯು ನಮ್ಮ ಜೀರ್ಣಾಂಗವ್ಯೂಹ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಿ ದೀರ್ಘಕಾಲೀನ ರೋಗಗಳ ಅಪಾಯವನ್ನು ನಿಯಂತ್ರಿಸುತ್ತದೆ.

    ಇದನ್ನೂ ಓದಿ: ಸಿನಿಮಾಗೆ ಆಯ್ಕೆಯಾದ ಭರತನಾಟ್ಯ ಪ್ರವೀಣೆ ಜಾಹ್ನವಿ

    ಅರಿಶಿನವು ನಮ್ಮ ದೇಹಕ್ಕೆ ಸಂಜೀವಿನಿಯಾಗಿದ್ದು, ಆಂಟಿ ವೈರಲ್, ಬ್ಯಾಕ್ಟೀರಿಯಾ ವಿರೋಧಿ ಜತೆಗೆ ಸಣ್ಣ ಪುಟ್ಟ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನ್ಸೂನ್ ಸೋಂಕನ್ನು ತಡೆಗಟ್ಟಲು ಬಿಸಿ ಆಹಾರವನ್ನು ಸೇವಿಸುವುದು ಸಹ ಉಪಯುಕ್ತವಾಗಿದೆ. ಮಾನ್ಸೂನ್ ಸಂಬಂಧಿತ ಕಾಯಿಲೆಗಳು ಕೆಮ್ಮು, ಶೀತ, ಹೊಟ್ಟೆಯ ಸೋಂಕುಗಳನ್ನು ತಡೆಯಲು ಇದು ಸಹಾಯಕವಾಗಿದೆ. ಜತೆಗೆ ಉಗುರುಬೆಚ್ಚಗಿನ ನೀರನ್ನು ಕುಡಿಯುವ ಮೂಲಕ ರೋಗಗಳಿಂದ ಪಾರಾಗಬಹುದು.

    ಬೆಳ್ಳುಳ್ಳಿಯ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅದ್ಭುತ ಪರಿಹಾರವಾಗಿದೆ. ಬೆಳ್ಳುಳ್ಳಿಯು ಉರಿಯೂತದ, ಆಂಟಿವೈರಲ್, ಆಂಟಿಫಂಗಲ್ ಮತ್ತು ಆಂಟಿಪ್ರೊಟೊಜೋಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನಿಮ್ಮ ದೇಹವನ್ನು ಮಾನ್ಸೂನ್ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಿರಂತರ ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಇದು ಪರಿಣಾಮಕಾರಿದ್ದು, ಇದರ ಜತೆಗೆ ಮೆಂತ್ಯೆ ಕಾಳುಗಳು, ಎಲೆ ಸೊಪ್ಪು ಹಾಗೂ ಧಾನ್ಯಗಳನ್ನು ಬಳಸಬಹುದಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts