ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆರಗಿದವು ಕರಡಿಗಳು: ಇಂದು ಬೆಳ್ಳಂಬೆಳಗ್ಗೆ ನಡೆದ ದಾಳಿ!

ದಾವಣಗೆರೆ: ಜಿಲ್ಲೆಯ ವಿವಿಧ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕರಡಿ ಉಪಟಳ ಹೆಚ್ಚಾಗಿದ್ದು, ಪದೇಪದೆ ಕರಡಿ ದಾಳಿ ಘಟನೆಗಳು ಸುದ್ದಿಯಾಗುತ್ತಲೇ ಇವೆ. ಶುಕ್ರವಾರ ಬೆಳ್ಳಂಬೆಳಗ್ಗೆಯೇ ಇಂಥದ್ದೇ ಘಟನೆ ಮರುಕಳಿಸಿದ್ದು ರೈತನ ಮೇಲೆ ಹಿಂಬದಿಯಿಂದ ದಾಳಿ ಎಸಗಿರುವುದು ಕಂಡುಬಂದಿದೆ. ಈ ಕರಡಿ ದಾಳಿ ಘಟನೆ ಜಗಳೂರು ತಾಲೂಕಿನ ಬಸವನ ಕೋಟೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ರೈತ ದುರುಗಪ್ಪ ತಮ್ಮ ಜಮೀನಿಗೆ ಹೋಗುವ ದಾರಿಯ ಮಧ್ಯೆ ಕರಡಿಗಳು ದಾಳಿ ನಡೆಸಿವೆ. ಕರಡಿಗಳು ಹಿಂಬದಿಯಿಂದ ಬರುತ್ತಿದ್ದುದು ದುರುಗಪ್ಪ ಅವರ ಅರಿವಿಗೆ ಬಂದಿರಲಿಲ್ಲ. … Continue reading ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆರಗಿದವು ಕರಡಿಗಳು: ಇಂದು ಬೆಳ್ಳಂಬೆಳಗ್ಗೆ ನಡೆದ ದಾಳಿ!