ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಿಗಳಾಗಿ: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಸಲಹೆ

ಮೈಸೂರು: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಮಾನವ ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಿಯಾಗಬೇಕೇ ಹೊರತು, ತಂತ್ರಜ್ಞಾನದ ಉತ್ಪನ್ನದಂತೆ ಆಗಬಾರದು ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಅಭಿಪ್ರಾಯಪಟ್ಟರು.ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎಂಎಂಸಿ ಅಲುಮ್ನಿ ಅಸೋಸಿಯೇಷನ್‌ನಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾಲಯದ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ 95ನೇ ಪದವೀಧರರ ದಿನಾಚರಣೆ ‘ಸಮ್ಮರ್ ಡ್ರೀಮ್ಸ್’ ನಲ್ಲಿ ಮಾತನಾಡಿದರು.ಇಂದು ತಂತ್ರಜ್ಞಾನ ಡಿಜಿಟಲ್ ಕ್ಷೇತ್ರವನ್ನೂ ದಾಟಿ ಕ್ವಾಂಟಮ್ ಕ್ಷೇತ್ರದತ್ತ ಸಾಗುತ್ತಿದೆ. ಹಲವಾರು ಸಂಗತಿಗಳ, ಅನುಭವಗಳನ್ನು ಶೋಧಿಸಿ ಅನುಮಾನಗಳಿಗೆ ಉತ್ತರ, … Continue reading ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಿಗಳಾಗಿ: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಸಲಹೆ