ನವದೆಹಲಿ: ಆಸ್ಟ್ರೆಲಿಯಾ ಪ್ರವಾಸದ ವೈಫಲ್ಯದ ಬಗ್ಗೆ ಪರಾಮರ್ಶೆ ನಡೆಸಲು ಬಿಸಿಸಿಐ ಅಧಿಕಾರಿಗಳು ಭಾರತ ತಂಡದ ನಾಯಕ ರೋಹಿತ್ ಶರ್ಮ, ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜತೆಗೆ ಶನಿವಾರ ಎರಡು ಗಂಟೆಗೂ ಅಧಿಕ ಸಮಯದವರೆಗೆ ಸಭೆ ನಡೆಸಿದರು. ಇದರಲ್ಲಿ ಯಾವುದೇ ಮಹತ್ವದ ಬದಲಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳದಿದ್ದರೂ, ರೋಹಿತ್ ಶರ್ಮ ಚಾಂಪಿಯನ್ಸ್ ಟ್ರೋಫಿವರೆಗೆ ಮಾತ್ರ ನಾಯಕರಾಗಿ ಮುಂದುವರಿಯುವ ಖಚಿತತೆ ನೀಡಲಾಗಿದೆ. ನಂತರ ಟೂರ್ನಿಯ ನಿರ್ವಹಣೆ ಆಧರಿಸಿ ಅವರ ಭವಿಷ್ಯ ನಿರ್ಧಾರವಾಗಲಿದೆ. ಇದಲ್ಲದೆ ಮತ್ತೋರ್ವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭವಿಷ್ಯ ನಿರ್ಧರಿಸುವಲ್ಲೂ ಚಾಂಪಿಯನ್ಸ್ ಟ್ರೋಫಿಯಲ್ಲಿನ ನಿರ್ವಹಣೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗಿದೆ.

ಆಸೀಸ್ ಪ್ರವಾಸದ ವೈಲ್ಯಕ್ಕೆ ತಕ್ಷಣದಲ್ಲೇ ಮಹತ್ವದ ಬದಲಾವಣೆಗಳನ್ನು ಮಾಡದಿದ್ದರೂ, ಭವಿಷ್ಯದಲ್ಲಿ ಕೆಲ ಮಹತ್ವದ ಬದಲಾವಣೆಗಳಾಗುವುದು ಖಚಿತವೆಂಬ ಸೂಚನೆಯನ್ನು ಬಿಸಿಸಿಐ ಬಿಟ್ಟುಕೊಟ್ಟಿದೆ. ಮುಂಬೈನ ಪಂಚತಾರಾ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಬಿಸಿಸಿಐ ಪರವಾಗಿ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಾಜರಾಗಿದ್ದರು. ಆಸೀಸ್ ಪ್ರವಾಸದ ವೈಲ್ಯಕ್ಕೆ ಹಿರಿಯ ಆಟಗಾರರು ಾಮ್ರ್ನಲ್ಲಿಲ್ಲದೆ ಇದ್ದುದು ಪ್ರಮುಖ ಕಾರಣ ಎಂದೂ ಸಭೆಯಲ್ಲಿ ದೂರಲಾಗಿದೆ.
“ಬಾರ್ಡರ್&ಗಾವಸ್ಕರ್ ಟ್ರೋಫಿಯ ನಿರ್ವಹಣೆಯ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಯಿತು. ಎಲ್ಲಿ ತಪ್ಪಾಯಿತು ಮತ್ತು ಯಾವೆಲ್ಲ ಬದಲಾವಣೆಗಳು ಅಗತ್ಯವಾಗಿವೆ ಎಂದೂ ಚರ್ಚಿಸಲಾಯಿತು. ಆದರೆ ತಕ್ಷಣಕ್ಕೆ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಬಿಜಿಟಿ ಸರಣಿಯಲ್ಲಿ 1-3ರಿಂದ ಸೋತ ಭಾರತ ತಂಡ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಚಾಂಪಿಯನ್ಸ್ ಟ್ರೋಫಿಯಂಥ ಮಹತ್ವದ ಐಸಿಸಿ ಟೂರ್ನಿಗೆ ಇನ್ನು ಕೇವಲ 6 ವಾರವಷ್ಟೇ ಬಾಕಿ ಇರುವುದರಿಂದ ತಕ್ಷಣಕ್ಕೆ ಯಾವುದೇ ಮಹತ್ವದ ಬದಲಾವಣೆ ಮಾಡಿದರೆ ಅದು ತಂಡದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಮಾರ್ಚ್ 9ರಂದು ಚಾಂಪಿಯನ್ಸ್ ಟ್ರೋಫಿ ಮುಗಿದ ಬಳಿಕ ಭಾರತ ತಂಡದ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಲಿದ್ದಾರೆ. ಮೇ 24ಕ್ಕೆ ಐಪಿಎಲ್ ಮುಗಿಯುವ ನಿರೀೆ ಇದ್ದು, ನಂತರ ಜೂನ್ 20ಕ್ಕೆ ಇಂಗ್ಲೆಂಡ್ನಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ. ಅಂದರೆ ಭಾರತ ತಂಡದ ಮುಂದಿನ ಟೆಸ್ಟ್ ಸರಣಿಗೆ ಇನ್ನೂ 5 ತಿಂಗಳ ಸಮಯವಿದೆ. ಹೀಗಾಗಿ ತಕ್ಷಣಕ್ಕೆ ಯಾವುದೇ ನಿರ್ಧಾರದ ಅಗತ್ಯವಿಲ್ಲ ಎಂದು ಬಿಸಿಸಿಐ ಪರಿಗಣಿಸಿದೆ.
ಆಸೀಸ್ನಲ್ಲಿ ಆಡಿದ 5 ಇನಿಂಗ್ಸ್ಗಳಲ್ಲಿ 31 ರನ್ ಮಾತ್ರ ಗಳಿಸಿದ್ದ 37 ವರ್ಷದ ರೋಹಿತ್ ಶರ್ಮ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗುವಂಥ ಯಾವುದೇ ಸಾಧ್ಯತೆ ಸದ್ಯಕ್ಕಿಲ್ಲ. ಆದರೆ 36 ವರ್ಷದ ವಿರಾಟ್ ಕೊಹ್ಲಿ ಸದ್ಯಕ್ಕೆ ರೋಹಿತ್ಗಿಂತ ಸುಸ್ಥಿತಿಯಲ್ಲಿದ್ದರೂ, ಅವರ ಮುಂಬರುವ ನಿರ್ವಹಣೆಗಳ ಮೇಲೆ ನಿಗಾ ವಹಿಸಲಾಗುತ್ತದೆ ಎನ್ನಲಾಗಿದೆ. ಆಸೀಸ್ನಲ್ಲಿ ಕೊಹ್ಲಿ 9 ಇನಿಂಗ್ಸ್ಗಳಲ್ಲಿ 190 ರನ್ಗಳಷ್ಟೇ ಗಳಿಸಿದ್ದರೂ, ಇದರಲ್ಲಿ ಒಂದು ಶತಕವೂ ಸೇರಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್, ಕೊಹ್ಲಿ ತೋರುವ ನಿರ್ವಹಣೆ ಅವರ ವೃತ್ತೀಜಿವನದ ಮೊಟಕು ಅಥವಾ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.
ಭಾರತ ಟಿ20 ತಂಡಕ್ಕೆ ಹೊಸ ಉಪನಾಯಕನ ನೇಮಕ; ಗಿಲ್, ಜೈಸ್ವಾಲ್, ಪಂತ್ಗೆ ವಿಶ್ರಾಂತಿ