ತೇರದಾಳ(ಗ್ರಾ): ತೇರದಾಳ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ, ಏಕೆಂದರೆ ಇಲ್ಲಿ ಅಲ್ಲಮಪ್ರಭುದೇವನ ವಾಸವಿದೆ. ಈ ಹಿಂದಿನಿಂದಲೂ ಬಸವರಾಜ ಅವರು ಅವನ ಮೇಲೆ ನಂಬಿಕೆ ಇಟ್ಟು ಸೇವೆ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಖಂಡಿತವಾಗಿ ಮುಂದೊಂದ ದಿನ ಉನ್ನತ ಹುದ್ದೆ ಹೊಂದುವುದರಲ್ಲಿ ಎರಡು ಮಾತಿಲ್ಲ. ಬಸವರಾಜನವರು ತೇರದಾಳಕ್ಕೆ ದೊಡ್ಡ ಕೊಡುಗೆ ಇದ್ದಂತೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಬರಹಗಾರ ಸಿದ್ಧರಾಜ ಪೂಜಾರಿ ಹೇಳಿದರು.

ತೇರದಾಳ ಹಾಗೂ ಕಸಾಪ ರಬಕವಿ ಬನಹಟ್ಟಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸಿಬಿಎಸ್ಇ ಸ್ಕೂಲ್ ಶೈಕ್ಷಣಿಕವಾಗಿ ಇತಿಹಾಸ ಹೊಂದಿದ ಸಂಸ್ಥೆ. ಜೋಳಿಗೆಯಿಂದ ಪ್ರಾರಂಭವಾದ ಈ ಸಂಸ್ಥೆ ಇಂದು ಇಷ್ಟೊಂದು ಸುಸಜ್ಜಿತವಾಗಿ ಬೆಳೆದು ರಾಜ್ಯವ್ಯಾಪಿ ತನ್ನದೆ ಆದ ಛಾಪು ಮೂಡಿಸಿದೆ. ಇದಕ್ಕೆಲ್ಲ ಕಾರಣರಾದ ಆಡಳಿತ ಮಂಡಳಿಯ ಸದಸ್ಯರನ್ನು ಸಿಬ್ಬಂದಿವರ್ಗದವರಿಗೆ ನಾನು ಅತ್ಯಂತ ಗೌರವದಿಂದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಪಟ್ಟಣದಲ್ಲಿಯ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರನ್ಯಾಶನಲ್ ಪಬ್ಲಿಕ್ ಸಿ.ಬಿ.ಎಸ್.ಇ ಸ್ಕೂಲ್ ಚೇರ್ಮನ್ರಾಗಿ ಆಯ್ಕೆಯಾದ ಬಸವರಾಜ ಬಾಳಿಕಾಯಿಯವರನ್ನು ತೇರದಾಳದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗಂಗಾಧರ ಮೋಪಗಾರ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಕಸಾಪ ಅಧ್ಯಕ್ಷ ಮ.ಕ.ಮೇಗಾಡಿಯವರು ತಮ್ಮ ಸಂಘದ ಸದಸ್ಯರೊಂದಿಗೆ ಸನ್ಮಾನಿಸಿದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಬಸವರಾಜ ಬಾಳಿಕಾಯಿ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಆಡಳಿತ ಮಂಡಳಿಯವರ ನೀಡಿದ ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ವಿಶೇಷ ಗಮನ ಹರಿಸಿ, ಉತ್ತರೊತ್ತರವಾಗಿ ಬೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರಾಸ್ತಾವಿಕವಾಗಿ ಮ.ಕೃ. ಮೇಗಾಡಿ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರಾದ ರಮೇಶ ಅವರಾದಿ, ಶಂಕರ ಮಂಗಸೂಳಿ, ಅಪ್ಪು ಮಂಗಸೂಳಿ, ಶಂಕರ ಹೊಸಮನಿ, ಎಂ.ಸಿ. ಕುಂಚಗನೂರ, ಶಿವಾನಂದ ನೀವರಗಿ, ಶ್ರೀಶೈಲ ಹುದ್ದಾರ, ಡಾ.ಶಂಕರ ಅಥಣಿ, ಮಹಾಂತೇಶ ಪಂಚಾಕ್ಷರಿ, ಷಣ್ಮುಖ ಬಿಜ್ಜರಗಿ, ಮಹೇಶ ಯಾದವಾಡ, ಮಹೇಶ ಹಂಜಿ, ಆಡಳಿತಾಧಿಕಾರಿ ಎಂ.ಬಿ.ಮಾಳೆದ ಮತ್ತಿತರರಿದ್ದರು. ಗಂಗಾಧರ ಮೋಪಗಾರ ವಂದಿಸಿದರು.