ದೇಸಿ ಸಂಸ್ಕೃತಿಗೆ ಗ್ರಾಮೀಣ ಭಾಗದ ಕೊಡುಗೆ ಅಪಾರ

Basavanbagewadi, Desi Culture, Kannada Sahitya Parishad, Hasimpira Valikara, Social Drama, Takkalaki,

ಬಸವನಬಾಗೇವಾಡಿ: ಶತಮಾನದಿಂದಲೂ ನಾಟಕಗಳು ಗ್ರಾಮೀಣರ ಮನರಂಜನೆ ಕೇಂದ್ರಗಳಾಗಿದ್ದವು. ಆಧುನಿಕತೆ ಭರಾಟೆಯಲ್ಲಿ ನಾಟಕಗಳನ್ನು ನೋಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಅತ್ಯಂತ ಶೋಚನಿಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಟಕ್ಕಳಕಿಯ ಕರಿಸಿದ್ಧೇಶ್ವರ ನಾಟ್ಯ ಸಂಘದ ‘ರೈತನ ಹೆಸರು ನಾಡಿನ ಹೆಸರು’ ಎಂಬ ಸಾಮಾಜಿಕ ನಾಟಕವನ್ನು ಶನಿವಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಮಾತ್ರ ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಜಾತ್ರೆ, ಉತ್ಸವ, ಹಬ್ಬ ಹರಿದಿನಗಳ ಆಚರಣೆ ಹೆಚ್ಚು ಉಳಿದಿದೆ ಎಂದರು.

ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಗಮೇಶ ಓಲೇಕಾರ ಮಾತನಾಡಿ, ನಾಟಕಗಳು ಸಮಾಜದ ನ್ಯೂನತೆಗಳನ್ನು ಸರಿಪಡಿಸಿ ಸನ್ಮಾರ್ಗ ತೋರಿಸುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ರವಿ ಕಿತ್ತೂರ ಮಾತನಾಡಿದರು.

ಮುಖಂಡ ದುಂಡಯ್ಯ ಹಿರೆೀಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಟಿ.ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ರಾಜೇಸಾಬ ಶಿವನಗುತ್ತಿ, ಶಂಕರಗೌಡ ಬಿರಾದಾರ, ಶಪೀಕ ಹೊಕ್ರಾಣಿ, ಭೀಮಣ್ಣ ಜಗ್ಗಲ, ರುದ್ರಗೌಡ ಪಾಟೀಲ, ಶರಣಪ್ಪ ಬಳ್ಳಾವೂರ, ಜೆ.ಸಿ.ವಂದಾಲ, ಚಂದ್ರಶೇಖರಗೌಡ ಪಾಟೀಲ, ತಿಪ್ಪಣ್ಣ ಜ್ಯೋತಿ, ಸುರೇಶ ಚಿಮ್ಮಲಗಿ, ಅರವಿಂದ ಗಂಗೂರ, ಎಸ್.ಜಿ.ಪಾಟೀಲ, ನೀಲಾ ಪಾಟೀಲ, ಶಂಕರಗೌಡ ಬಿರಾದಾರ, ಶ್ರೀಶೈಲ ಪೂಜಾರಿ, ಹಣಮಂತ ಟಕ್ಕಳಕಿ, ಗುರುಸಿದ್ದ ಪೂಜಾರಿ, ಕರೆಪ್ಪ ಬಂಜೋಡಿ ಇತರರಿದ್ದರು. ಪಾಂಡುಗೌಡ ಬಿರಾದಾರ ಸ್ವಾಗತಿಸಿದರು. ಸಾಯಬಣ್ಣ ಹಡಪಡ ನಿರೂಪಿಸಿದರು.

Share This Article

ಈ 3 ರಾಶಿಯ ಮಹಿಳೆಯರು ಹುಟ್ಟಿನಿಂದಲೇ ಅಪಾರ ಬುದ್ಧಿಶಕ್ತಿ ಹೊಂದಿರುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…