ವಿಜಯವಾಣಿ ಸುದ್ದಿಜಾಲ ಧಾರವಾಡ
ಅನುಭವ ಮಂಟಪ ಹಾಗೂ ಬಸವ ಶಾಂತಿ ಮಿಷನ್ ಟ್ರಸ್ಟ್ ವತಿಯಿಂದ ವಿಶ್ವಗುರು ಬಸವಣ್ಣ, ಜ್ಞಾನನಿಧಿ ಅಲ್ಲಮಪ್ರಭು, ವೈರಾಗ್ಯನಿಧಿ ಶಿವಶರಣೆ ಅಕ್ಕಮಹಾದೇವಿ ಜಯಂತಿಯನ್ನು ಏ. 30ರಂದು ಯಾಲಕ್ಕಿಶೆಟ್ಟರ್ ಕಾಲನಿಯ ಬಸವಶಾಂತಿ ಮಿಷನ್ ಟ್ರಸ್ಟ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಅನುಭವ ಮಂಟಪ ಅಧ್ಯಕ್ಷ ಡಾ. ಸಂಗಪ್ಪ ಕೊಟೂರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ಕ್ಕೆ ಪ್ರೊ. ಸಿ.ಎಂ. ಕುಂದಗೋಳ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಯಾಗಿ ಮಹಾದೇವ ಹೊರಟ್ಟಿ ಆಗಮಿಸುವರು. ಉಪನ್ಯಾಸಕರಾಗಿ ಪ್ರೊ. ಶಂಭುಲಿಂಗ ಹೆಗಡಾಳ, ಡಾ. ವೀಣಾ ಬಿರಾದಾರ ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಅವರಿಗೆ ಸನ್ಮಾನಿಸಲಾಗುವುದು. ಎಂದರು.
ಇದಕ್ಕೂ ಪೂರ್ವದಲ್ಲಿ ಸಂಜೆ 4 ಗಂಟೆಗೆ ಯಾಲಕ್ಕಿಶೆಟ್ಟರ್ ಕಾಲನಿ ಸಪ್ತಗಿರಿ ಲೇಔಟ್ ಉದ್ಯಾನದಿಂದ ಆರಂಭವಾಗುವ ಬಸವಣ್ಣನವರ ಭಾವಚಿತ್ರ ಮೆರವಣಿಗೆಗೆ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಚಾಲನೆ ನೀಡುವರು. ನಂತರ ಶಂಕರಮಠ, ಕರಿಯಮ್ಮಗುಡಿ, ಹುಲ್ಲೂರ ಬಿಲ್ಡಿಂಗ ಮಾರ್ಗವಾಗಿ ಸಭಾಭವನಕ್ಕೆ ಆಗಮಿಸಲಿದೆ. ಮೆರವಣಿಗೆಯಲ್ಲಿ ವಚನ ಗಾಯನ ಪ್ರಸ್ತುತಿಯ ಜತೆಗೆ ಶಾಲಾ ಮಕ್ಕಳಿಂದ ವಚನ ಗ್ರಂಥ ಹೊತ್ತಿಗೆಗಳ ಪಥ ಸಂಚಲನ ಹಾಗೂ ಶಿವಶರಣ, ಶರಣೆಯರ ವೇಷಭೂಷಣ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಶಾರದಾ ಭಟ್, ಡಾ. ಶ್ರೀಧರ ಕುಲಕರ್ಣಿ, ಅಂಜಲೀನಾ ಗ್ರೇಗರಿ, ಪ್ರೇಮಕ್ಕ ಹೊರಟ್ಟಿ, ಕುಮಾರೇಶ್ವರ ಬಡಾವಣೆ ಮಹಿಳೆಯರು ವಚನ ಸಂಗೀತ ಪ್ರಸ್ತುತಪಡಿಸುವರು. ಸಮಾರಂಭಕ್ಕೆ ಬಸವ ಭಕ್ತರು ಹಾಗೂ ಬಸವ ಸಂಘಟನೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ಮಹಾದೇವ ಹೊರಟ್ಟಿ, ಡಾ. ವೀಣಾ ಬಿರಾದಾರ, ಶಶಿಕಲಾ ಕೊಳಕೂರ, ಡಾ. ರತ್ನಾ ಐರಸಂಗ, ಅಶೋಕ ಕೊಳಕೂರ, ಶ್ರೀಕಾಂತ ಯಲಿಗಾರ, ಸಂಗೀತಾ ಮಠಪತಿ, ಮಂಜುನಾಥ ಮೊಹರೆ, ಇತರರು ಇದ್ದರು.
