ಗಾಳಿ ಮಳೆಗೆ ಬಾಳೆ ತೋಟ ನಾಶ

Banana plantation destroyed by wind and rain

ಕುಳಗೇರಿ: ಹೋಬಳಿಯ ವಿವಿಧೆಡೆ ಬಾರಿ ಗಾಳಿಯೊಂದಿಗೆ ಸುರಿದ ಮಳೆಗೆ ಬಾಳೆ ಗಿಡಗಳು ನಾಶವಾಗಿವೆ.

blank

ಬೆಳವಲಕೊಪ್ಪ ಗ್ರಾಮದ ರೈತರಾದ ಸೋಮರಡ್ಡಿ ಶಿವಪ್ಪ ಲಿಂಗರಡ್ಡಿ ಅವರಿಗೆ ಸೇರಿದ 4.26 ಎಕರೆ, ಅನ್ನಪೂರ್ಣ ಸೋಮರಡ್ಡಿ ಲಿಂಗರಡ್ಡಿ ಅವರಿಗೆ ಸೇರಿದ 2.03 ಎಕರೆ, ಸವಿತಾ ಭೀಮನಗೌಡ ನಾಡಗೌಡ್ರ ಅವರಿಗೆ ಸೇರಿದ 7.10 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ತೋಟ ಕಟಾವಿಗೆ ಬಂದ ಸಂದರ್ಭದಲ್ಲಿ ನಾಶವಾಗಿದ್ದು, ಬೆಳೆಗಾರರಿಗೆ ನಷ್ಟವನ್ನುಂಟು ಮಾಡಿದೆ.

ತಿಮ್ಮಾಪೂರ ಎಸ್.ಎನ್. ಗ್ರಾಮದ ರೈತ ಸಂಗಯ್ಯ ಈರಯ್ಯ ಗಣಾಚಾರಿ ಅವರಿಗೆ ಸೇರಿದ ಒಂದು ಎಕರೆಯಲ್ಲಿ ಬೆಳೆದ ಬಾಳೆ ಮರಗಳು ನೆಲಕ್ಕುರುಳಿವೆ. ಈ ಕುರಿತು ಅವರ ಮಗ ಸಿದ್ದಯ್ಯ ಗಣಾಚಾರಿ ಮಾತನಾಡಿ, ಬಾಳೆ ಮರಗಳು ನಡು ಮುರಿದು ನಾಶವಾಗಿವೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ಕಳುಹಿಸಿದ್ದಾರೆ. ಸರ್ಕಾರದಿಂದ ಪರಿಹಾರ ದೊರಕಿದರೆ ನೆರವಾಗಲಿದೆ ಎಂದರು.

ಹಾನಿಗೊಳಗಾದ ಜಮೀನುಗಳಿಗೆ ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿಗಳಾದ ಲಕ್ಷ್ಮಣ ತಳವಾರ, ಸರಳಾ ಸೊಪ್ಪಿನ ಸೇರಿದಂತೆ ತೋಟಗಾರಿಕೆ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share This Article

ಕಣ್ಣಿನ ಸುತ್ತ ಕಪ್ಪು ಕಲೆಗಳ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಒಂದು ಕೆಲಸ ಮಾಡಿ..Dark Circles

Dark Circles :  ಕಣ್ಣಿನ ಸುತ್ತ ಕಾಣಿಸುವ ಕಪ್ಪು ಕಲೆಗಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಕಂಡು…

ಮಾವಿನ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿದೆ…mangoes

mangoes : ಮಾವು ಹಣ್ಣುಗಳ ರಾಜ. ಎಲ್ಲರೂ ಮಾವಿನ ಹಣ್ಣುಗಳಿಗಾಗಿ ಬೇಸಿಗೆಯನ್ನು ಎದುರು ನೋಡುವುದರಲ್ಲಿ ಆಶ್ಚರ್ಯವಿಲ್ಲ.…

ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

Battery Drain: ಇದು ಸ್ಮಾರ್ಟ್​ಫೋನ್ ಯುಗ. ಹೊಟ್ಟೆಗೆ ಹಿಟ್ಟಿಲ್ಲದೆ ಹೋದರೂ ಮೊಬೈಲ್​ಗೆ ನೆಟ್ಟಿರಲೇಬೇಕು ಎನ್ನುವಂತ ಪರಿಸ್ಥಿತಿ…