blank

ಆಗ ‘ಬಾ ನಲ್ಲೆ ಮಧುಚಂದ್ರಕೆ’; ಈಗ ‘ಬಾ ನಲ್ಲೆ ಮದುವೆಗೆ’ …

blank

ಬೆಂಗಳೂರು: ಹಲವು ವರ್ಷಗಳ ಹಿಂದೆ ‘ಬಾ ನಲ್ಲೆ ಮಧುಚಂದ್ರಕೆ’ ಎಂಬ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್​ ನಿರ್ದೇಶನ ಮಾಡಿದ್ದು ನೆನಪಿರಬಹುದು. ಈಗ ಕನ್ನಡದಲ್ಲಿ ಸದ್ದಿಲ್ಲದೆ ‘ಬಾ ನಲ್ಲೆ ಮದುವೆಗೆ’ ಎಂಬ ಇನ್ನೊಂದು ಚಿತ್ರ ತಯಾರಾಗಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಕೊನೆಗೂ Instagram ಖಾತೆ ತೆರೆದ ವಿಜಯ್​: 1 ದಿನದಲ್ಲಿ ಗಳಿಸಿದ ಫಾಲೋವರ್ಸ್​ ಸಂಖ್ಯೆ ಹುಬ್ಬೇರಿಸುವಂತಿದೆ!

ಹೊಸಬರೇ ಸೇರಿ ರೂಪಿಸಿರುವ ‘ಬಾ ನಲ್ಲೆ ಮದುವೆಗೆ’ ಚಿತ್ರದ ಟೀಸರ್ ಮತ್ತು ಐದು ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಚಾಮರಾಜನಗರದ ಎಂ.ಯೋಗೇಶ್‌ ನಂದನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚಿಸಿ ನಿರ್ದೇಶನ ಮಾಡುವುದರ ಜತೆಗೆ ಉರುಕಾತೇಶ್ವರಿ ಮೂವೀಸ್​ನಡಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

‘ಬಾ ನಲ್ಲೆ ಮದುವೆ’ ಚಿತ್ರಕ್ಕೆ ’ಹುಡುಗಿ ನೋಡಿ ಹುಚ್ಚರಾಗಬೇಡಿ’ ಎಂಬ ಅಡಿಬರಹವೂ ಇದೆ. ಅದರಂತೆ. ಅತಿಯಾದ ಪ್ರೀತಿಯಿಂದ ಏನೇನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ತುಂಬಾ ಇಷ್ಟಪಡುವುದು ಸಹ ಒಳ್ಳೆಯದಲ್ಲ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡಲಾಗಿದೆ.

ಇದೊಂದು ಗ್ರಾಮೀಣ ಪ್ರೇಮಕಥೆಯಾಗಿದ್ದು, ಅರ್ಜುನ್ ಮತ್ತು ಶೋಭಾ ನಾಯಕ-ನಾಯಕಿಯರಾಗಿ ನಟಿಸಿದ್ದರೆ. ಮಿಕ್ಕಂತೆ ಮೀಸೆ ಆಂಜನಪ್ಪ, ನಾಗೇಶ್‌ ಮಯ್ಯಾ, ಮೈಸೂರು ಮಂಜುಳಾ, ಗೋವಿಂದಪ್ಪ ಮುಂತಾದವರು ಅಭಿನಯಸಿದ್ದಾರೆ. ಚಾಮರಾಜನಗರದ ಸುತ್ತಮುತ್ತ 38 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಇದನ್ನೂ ಓದಿ: ‘ಬ್ರಹ್ಮಾಸ್ತ್ರ’ 2 ಮತ್ತು 3 ಬಿಡುಗಡೆ ಯಾವಾಗ? ಕೊನೆಗೂ ಸಿಕ್ಕಿತು ಉತ್ತರ …

‘ಬಾ ನಲ್ಲೆ ಮದುವೆಗೆ’ ಚಿತ್ರಕ್ಕೆ ದಿನೇಶ್​ ಕುಮಾರ್​ ಅವರ ಸಂಗೀತ ಮತ್ತು ಪ್ರಸನ್ನ ಕುಮಾರ್​ ಅವರ ಛಾಯಾಗ್ರಹಣವಿದೆ.

ಆಂಟಿ ಎಂದು ಕರೆದರೆ ನಿಮಗೇಕೆ ಕೋಪ ಬರುತ್ತೆ? ಅಭಿಮಾನಿ ಪ್ರಶ್ನೆಗೆ ಅನಸೂಯ ಕೊಟ್ಟ ಉತ್ತರ ವೈರಲ್​

Share This Article

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಸಿಗಲಿದ ಪರಿಹಾರ | Health Tips

ಇಂದಿನ ಕಾರ್ಯನಿರತ ಜೀವನ ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಇದು ಇಡೀ…

ಗಾಢನಿದ್ರೆಯಿಂದ ಮುಂಜಾನೆ 2-3 ಗಂಟೆಗೆ ಹಠಾತ್​ ಎಚ್ಚರವಾಗುತ್ತಿದೆಯೇ?; ಅದರ ಹಿಂದಿನ ಕಾರಣ ಹೀಗಿದೆ.. | Health Tips

ರಾತ್ರಿಯಲ್ಲಿ ಆಳವಾದ ಮತ್ತು ಸಾಕಷ್ಟು ನಿದ್ರೆ ಪಡೆಯುವುದು ಮುಖ್ಯ. ಆದರೆ ಅನೇಕ ಜನರಿಗೆ ನಿದ್ರೆಯ ಮಧ್ಯದಲ್ಲಿ…

ಕಲ್ಲಂಗಡಿಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಯಾವುದೇ ಕಾರಣಕ್ಕೂ ಇಷ್ಟು ಹೊತ್ತು ಇಡಲೇಬೇಡಿ, ಅಪಾಯ ಫಿಕ್ಸ್​! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…