More

    ಮನೆ ಬಾಡಿಗೆಗೆ ಕೇಳ್ತಾ ಬಂದವರು ಮಾಲೀಕನ ಹತ್ಯೆಗೆ ಯತ್ನಿಸಿದ್ರು..

     * ಮನೆ ಬಾಡಿಗೆಗೆ ಕೇಳುವ ಸೋಗಿನಲ್ಲಿ ಇಬ್ಬರಿಂದ ಕೃತ್ಯ * ಪರಾರಿಯಾಗುತ್ತಿದ್ದ ಓರ್ವನನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು

    ಬೆಂಗಳೂರು: ಮನೆ ಬಾಡಿಗೆಗೆ ಕೇಳುವ ಸೋಗಿನಲ್ಲಿ ಯಶವಂತಪುರದಲ್ಲಿ ಮನೆ ಮಾಲೀಕ ಹುಲಿಯಪ್ಪ (77) ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಸ್ಥಳೀಯ ಜನರು ಬೆನ್ನಟ್ಟಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗಾಯಗೊಂಡಿರುವ ಹುಲಿಯಪ್ಪ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜೇಶ್ ಎಂಬಾತನನ್ನು ಬಂಧಿಸಿ  ವಿಚಾರಣೆಗೆ ಒಳಪಡಿಸಲಾಗಿದೆ. ಹಳೇದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಹತ್ಯೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ಸುಹೇಲ್ ಎಂಬಾತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

    ನಿವೃತ್ತ ಶಿಕ್ಷಕ ಹುಲಿಯಪ್ಪ ಯಶವಂತಪುರದ ಸುಬೇದಾರ್ ಪಾಳ್ಯ ಮಸೀದಿ ಬಳಿ ವಾಸವಿದ್ದು, ಸ್ವಂತ ಮನೆಗಳನ್ನು ಹೊಂದಿದ್ದಾರೆ. ಮನೆಗಳನ್ನು ಬಾಡಿಗೆ ನೀಡಿದ್ದಾರೆ. ಅವುಗಳಲ್ಲಿ ಒಂದು ಮನೆ ಇತ್ತೀಚೆಗೆ ಖಾಲಿ ಆಗಿತ್ತು. ಮನೆ ಬಾಡಿಗೆಗೆ ಇದೆ ಎಂದು ಫಲಕ ಹಾಕಿದ್ದರು. ಶನಿವಾರ ರಾತ್ರಿ 8.30ರಲ್ಲಿ ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದಿದ್ದ ಇಬ್ಬರು ದುಷ್ಕರ್ವಿುಗಳು, ಮನೆಯ ಒಳನುಗ್ಗಿ ಹುಲಿಯಪ್ಪ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆಗೆ ಏಟು ತಗುಲಿದ್ದು, ಹುಲಿಯಪ್ಪ ಚೀರಾಡಿದ್ದರು. ನೆರೆಹೊರೆಯವರು ಕೂಡಲೇ ಸಹಾಯಕ್ಕೆ ಬಂದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಜನ ಆರೋಪಿಗಳನ್ನು ಬೆನ್ನಟ್ಟಿದ್ದು ರಾಜೇಶ್ ಸಿಕ್ಕಿಬಿದ್ದಿದ್ದಾನೆ. ಸುಹೇಲ್ ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಶ್ರೇಷ್ಠಮಾರ್ಗದಲ್ಲಿ ನಡೆಯಲೂ ಛಾತಿ ಬೇಕು!

    ಹುಲಿಯಪ್ಪಗೆ ಆರ್.ಎಂ.ಸಿ ಯಾರ್ಡ್ ಬಳಿ ಖಾಲಿ ಜಾಗ ಇದೆ. ಅದನ್ನು ಆರೋಪಿ ಸುಹೇಲ್​ನ ತಂದೆ ವಜೀರ್​ಗೆ ಗುಜರಿ ವ್ಯಾಪಾರಕ್ಕಾಗಿ ಬಾಡಿಗೆಗೆ ನೀಡಿದ್ದರು. ಇತ್ತೀಚೆಗೆ ಜಾಗವನ್ನು ಖಾಲಿ ಮಾಡುವಂತೆ ವಜೀರ್​ಗೆ ಹುಲಿಯಪ್ಪ ತಿಳಿಸಿದ್ದರು. ಇದೇ ವಿಚಾರಕ್ಕೆ ಕುಪಿತಗೊಂಡಿದ್ದ ಆರೋಪಿಗಳು ಹುಲಿಯಪ್ಪನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಣ ಕೊಡಿಸುವುದಾಗಿ ಚಿನ್ನದ ಬಳೆ ಪಡೆದು ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts