ಡಾ.ಪ್ರಸನ್ನಾಚಾರ್ಯರಿಗೆ ಜ್ಯೋತಿಷ್ಯ ಮಹಾಚಾರ್ಯ ಪ್ರಶಸ್ತಿ

ಬೆಂಗಳೂರು : ವೇದ, ವೇದಾಂತ ವಿದ್ವಾಂಸರಾದ ಜ್ಯೋತಿಷಿ ಡಾ.ಪ್ರಸನ್ನಾಚಾರ್ಯ ಎಸ್.ಕಟ್ಟಿಯವರಿಗೆ ಜ್ಯೋತಿಷ್ಯ ಮಹಾಚಾರ್ಯ ಪ್ರಶಸ್ತಿ ನೀಡಲಾಯಿತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಮೈಸೂರಿನ ಮಾಯಕಾರ ಗುರುಕುಲವು ಗವಿಪುರಂನ ಉದಯಭಾನು ಕಲಾ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 109ನೇ ರಾಷ್ಟ್ರೀಯ ಜ್ಯೋತಿಷ್ಯ ಸಮಾವೇಶದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ.ಪ್ರಸನ್ನಾಚಾರ್ಯರು ಮಂಡಿಸಿದ್ದ ‘ಜಾತಕದಲ್ಲಿ ಸಪ್ತಮಭಾವ ಚಿಂತನೆ’ ವಿಷಯಕ್ಕೆ ರಾಷ್ಟ್ರಮಟ್ಟದ ಜ್ಯೋತಿಷ್ಯ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜ್ಯೋತಿಷ್ಯ ಮಹಾಚಾರ್ಯ ಮತ್ತು ಅತೀಂದ್ರಿಯ ವಿಜ್ಞಾನದ ವಿಶೇಷಜ್ಞ ಎಂಬ ಬಿರುದು … Continue reading ಡಾ.ಪ್ರಸನ್ನಾಚಾರ್ಯರಿಗೆ ಜ್ಯೋತಿಷ್ಯ ಮಹಾಚಾರ್ಯ ಪ್ರಶಸ್ತಿ