ಬೆಂಗಳೂರು: ತಾಯಿಗೆ ಉದ್ಯೋಗ ನೀಡಿದ್ದನ್ನು ಪ್ರಶ್ನಿಸಿ ಗಲಾಟೆ ತೆಗೆದ ಪುತ್ರ ವಾಹನ ಶೋರೂಂ ಮುಖ್ಯಸ್ಥನ ಮೇಲೆ ಲಾಂಗ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಕಲ್ಕೆರೆ ಮುಖ್ಯರಸ್ತೆಯಲ್ಲಿರುವ ಕಲ್ಯಾಣಿ ಮೋಟಾರ್ಸ್ನ ಮುಖ್ಯಸ್ಥ ಶರತ್ರಾಜ್ ಹಲ್ಲೆಗೊಳ ಗಾಗಿದ್ದು, ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಆರೋಪಿ ಮಾರುತಿ ಎಂಬಾತನ ವಿರುದ್ಧ ರಾಮ ಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಮಮಮೂರ್ತಿನಗರದ ಅಮರಾವತಿ ಎಂಬಾಕೆ 6 ತಿಂಗಳಿನಿಂದ ಹೊರಮಾವು ಬಳಿ ಕಲ್ಕೆರೆ ಮುಖ್ಯರಸ್ತೆಯಲ್ಲಿರುವ ಕಲ್ಯಾಣಿ ಮೋಟಾರ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಆಕೆಯ ಪುತ್ರ ಮಾರುತಿ ಬುಧವಾರ (ಜ.8) ಸಂಜೆ 5 ಗಂಟೆಯಲ್ಲಿ ಶೋರೂಂ ಬಳಿ ಹೋಗಿ, ತಾಯಿಗೆ ನೌಕರಿ ಕೊಟ್ಟಿದ್ದನ್ನು ಪ್ರಶ್ನಿಸಿ ಶೋರೂಂ ನೌಕರರ ಜತೆ ಗಲಾಟೆ ತೆಗೆದಿದ್ದಾನೆ. ತನ್ನ ಬಳಿಯಿದ್ದ ಲಾಂಗ್ನಿಂದ ಮಳಿಗೆಯಲ್ಲಿನ ಪೀಠೋಪಕರಣಗಳನ್ನು ಹಾಳು ಮಾಡಿದ್ದಾನೆ. ಗಲಾಟೆ ತಡೆಯಲು ಮುಂದಾದ ಶರತ್ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.