More

    ದೆಹಲಿ ವಿಧಾನಸಭೆ ಚುನಾವಣೆ: ಸಿಎಂ ಕೇಜ್ರಿವಾಲ್​ ವಿರುದ್ಧ ಆಪ್​ ಟಿಕೆಟ್​ ನೀಡಲು 10-20 ಕೋಟಿ ರೂ. ಬೇಡಿಕೆ ಆರೋಪ

    ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ನೀಡಲು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ 10-20 ಕೋಟಿ ರೂ.ಗೆ ಬೇಡಿಕೆ ಇಟ್ಟರು ಎಂದು ಆಪ್​ ತೊರೆದು ಕಾಂಗ್ರೆಸ್​ ಸೇರಿರುವ ದ್ವಾರಕ ನಗರದ ಶಾಸಕ ಆದರ್ಶ್​ ಶಾಸ್ತ್ರಿ ಗಂಭೀರ ಆರೋಪ ಮಾಡಿದ್ದಾರೆ.

    ಟಿಕೆಟ್​ ನೀಡಲು ನಿರಾಕರಿಸಿದ್ದಕ್ಕೆ ಶಾಸಕ ಆದರ್ಶ್​ ಶಾಸ್ತ್ರಿ ಶನಿವಾರವಷ್ಟೇ ಕಾಂಗ್ರೆಸ್​ ಪಕ್ಷವನ್ನು ಸೇರಿದ್ದಾರೆ. ಆಪ್​ ತೊರೆದ ಬೆನ್ನಲ್ಲೇ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿರುವ ಶಾಸ್ತ್ರಿ, ಚುನಾವಣಾ ಟಿಕೆಟ್​ಗಾಗಿ 10 ರಿಂದ 20 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ ಆಪ್​ ಪಕ್ಷ ದ್ವಾರಕ ಕ್ಷೇತ್ರದಿಂದ ವಿನಯ್​ ಮಿಶ್ರಾ ಎಂಬುವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.

    ಆದರ್ಶ್​ ಶಾಸ್ತ್ರಿ ಅವರು ದೆಹಲಿಯ ಕಾಂಗ್ರೆಸ್​ ಘಟಕದಲ್ಲಿ ರಾಜ್ಯಾಧ್ಯಕ್ಷ ಸುಭಾಷ್​ ಚೋಪ್ರಾ ಹಾಗೂ ಎಐಸಿಸಿ ಉಸ್ತುವಾರಿ ಪಿ.ಸಿ. ಛಕೂ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

    ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಮೊಮ್ಮಗನಾಗಿರುವ ಆದರ್ಶ್​ ಶಾಸ್ತ್ರಿ ಆಮ್​ ಆದ್ಮಿ ಪಕ್ಷದಲ್ಲಿ ರಾಷ್ಟ್ರೀಯ ವಕ್ತಾರ ಮತ್ತು ಸಾಗರೋತ್ತರ ವ್ಯವಹಾರಗಳ ಸಹ-ಸಂಚಾಲಕರಾಗಿದ್ದರು.

    ದೆಹಲಿ ವಿಧಾನಸಭಾ ಚುನಾವಣೆ ಫೆ.8ರಂದು ನಡೆಯಲಿದ್ದು, 11ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts