ಕಲಾ ಸೇವೆ ಪರಿಗಣಿಸಿ ಗೌರವ

blank

ಹಗರಿಬೊಮ್ಮನಹಳ್ಳಿ: ತಾಲೂಕಿನ ಶೀಗೇನಹಳ್ಳಿ ಗ್ರಾಮದ ಬಯಲಾಟ ಕಲಾವಿದ ಚುಕ್ಕನಕಲ್ ರಾಮಣ್ಣ
ಅವರಿಗೆ ಅಕಾಡೆಮಿಯಿಂದ 2024-25ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ. ರಾಮಣ್ಣ ಕುಟುಂಬ ದೊಡ್ಡಾಟ ಕಲೆಯನ್ನು ಮೈಗೂಡಿಸಿಕೊಂಡು ಬಂದ ಕಾರಣ ಮನೆಯ ಹಿರಿಯರ ಪ್ರಭಾವದಿಂದ ಕಲೆ ಕರಗತ ಮಾಡಿಕೊಂಡಿದ್ದಾರೆ. ಮೊಟ್ಟ ಮೊದಲಿಗೆ ರಾಮಾಂಜನೇಯ ಯುದ್ಧ, ಯುದ್ಧಕಾಂಡ, ಶುಂಭ ನಿಶುಂಭ, ಮಹಿಷಾಸುರ ಮರ್ದಿನಿ, ಕುರುಕ್ಷೇತ್ರ, ಕನಕಾಂಗಿ ಕಲ್ಯಾಣಿ, ಇಂದ್ರಜಿತ್ ಕಾಳಗ, ಕಿರಾತಾರ್ಜುನ ಕಾಳಗ, ಲವಕುಶ, ವಿರಾಟ ಪರ್ವ, ದ್ರೋಣ ಪರ್ವ(ವೀರ ಅಭಿಮನ್ಯು), ಕರ್ಣಪರ್ವ, ಸಭಾಪರ್ವ, ದೇವೀಮಹಾತ್ಮೆ, ಮೈಲಾರಲಿಂಗೇಶ್ವರ ಮಹಾತ್ಮ, ಲಕ್ಷಿಣಿ ಸ್ವಯಂವರ, ಪ್ರಮೀಳಾ ದರ್ಬಾರು, ಮುಂತಾದ ಬಯಲಾಟಗಳ ಪ್ರದರ್ಶನ ನೀಡಿರುತ್ತಾರೆ. ಇವರ ಕಲಾ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

 

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…