‘ಗೇಟ್‌ವೇ ಆಫ್ ಇಂಡಿಯಾ’ ಬಳಿ ಸ್ಟಾರ್ ದಂಪತಿ; ‘ವಿರುಷ್ಕಾ’ರನ್ನು ನೋಡಿ ಜನರು ಖುಷ್​​ | Anushka Sharma and Virat Kohli

blank

ಮುಂಬೈ: ಸ್ಟಾರ್​ ದಂಪತಿ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ(Anushka Sharma and Virat Kohli) ಭಾನುವಾರ(ಜನವರಿ 12) ಮುಂಬೈನಿಂದ ಅಲಿಬಾಗ್‌ಗೆ ಪ್ರಯಾಣ ಬೆಳೆಸಿದರು. ಸಾರ್ವಜನಿಕವಾಗಿ ಕಾಣಿಸಿಕೊಂಡ ವಿರಾಟ್​ ಮತ್ತು ಅನುಷ್ಕಾ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದನ್ನು ಓದಿ: ವಿತ್ತ ಸಚಿವೆಗೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್; ಪ್ರಧಾನಿ ಮೋದಿ & ತೆರಿಗೆ ಪಾವತಿ ಕುರಿತು ಲೆಟರ್​ನಲ್ಲಿ ಉಲ್ಲೇಖ | Sukesh Chandrashekar

ವಿಡಿಯೋದಲ್ಲಿ ಗೇಟ್‌ವೇ ಆಫ್ ಇಂಡಿಯಾದಲ್ಲಿ ಇಬ್ಬರೂ ತಮ್ಮ ಕಾರಿನಿಂದ ಇಳಿಯುವುದನ್ನು ನೋಡಬಹುದು. ಅವರನ್ನು ಸ್ವಾಗತಿಸಿದವರನ್ನು ನೋಡಿ ವಿರಾಟ್ ಪ್ರೀತಿಯಿಂದ ಮುಗುಳ್ನಕ್ಕರು ಆದರೆ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡದೆ ಮುಂದೆ ಸಾಗಿ, ಇಬ್ಬರೂ ಬೇಗನೆ ಒಳಗೆ ಹೋದರು.

 

View this post on Instagram

 

A post shared by Manav Manglani (@manav.manglani)

ಮತ್ತೊಂದು ವಿಡಿಯೋದಲ್ಲಿ ವಿರಾಟ್ ಅನುಷ್ಕಾ ಭುಜದ ಮೇಲೆ ಕೈಯಿಟ್ಟು ಮಾತನಾಡುತ್ತಿದ್ದಾರೆ. ಅನುಷ್ಕಾ ಸೀರಿಯಸ್ ಆಗಿ ಹೇಳುತ್ತಿದ್ದಾರೆ. ಇಬ್ಬರೂ ಕ್ಯಾಮೆರಾಗೆ ಪೋಸ್ ಕೊಡಲು ನಿಲ್ಲಲಿಲ್ಲ. ಅಂದ್ಹಾಗೆ ಅವರು ಸುತ್ತಲಿದ್ದ ಜನರಲ್ಲಿ ಕೆಲವರು ದಂಪತಿ ನೋಡಿ ಖುಷಿಪಟ್ಟರೆ, ಮತ್ತೆ ಕೆಲವರು ಶಾಕಿಂಗ್​ ರಿಯಾಕ್ಷನ್ ಕೊಟ್ಟಿದ್ದಾರೆ.

 

View this post on Instagram

 

A post shared by Manav Manglani (@manav.manglani)

ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ಪ್ರೇಮಾನಂದ ಗೋವಿಂದ್ ಶರಣ್ ಮಹಾರಾಜ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಇಬ್ಬರು ಪ್ರೇಮಾನಂದ ಗೋವಿಂದ್ ಶರಣ್ ಮಹಾರಾಜ್ ಅವರೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2013ರಲ್ಲಿ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು, ವಿವಾಹದವರೆಗೂ ಅವರಿಬ್ಬರು ತಮ್ಮ ಸಂಬಂಧವನ್ನು ಗೌಪ್ಯವಾಗಿ ಇಟ್ಟಿದ್ದರು. 2017ರಲ್ಲಿ ಇಟಲಿಯಲ್ಲಿ ವೈವಾಹಿಕ ದಾಂಪತ್ಯಕ್ಕೆ ಕಾಲಿಟ್ಟ ಈ ದಂಪತಿಗೆ ವಾಮಿಕ ಮತತು ಅಕಾಯ್​​ ಎಂಬ ಇಬ್ಬರು ಮಕ್ಕಳಿದ್ದಾರೆ. ಅನುಷ್ಕಾ 2018ರ ‘ಝೀರೋ’ ಚಿತ್ರದ ನಂತರ ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ.(ಏಜೆನ್ಸೀಸ್​​)

ಪ್ರೇಮಾನಂದ ಮಹಾರಾಜ್‌ ಆಸ್ಥಾನದಲ್ಲಿ ‘ಸ್ಟಾರ್​’ ದಂಪತಿ; ಮಕ್ಕಳೊಂದಿಗೆ ವಿರಾಟ್​ & ಅನುಷ್ಕಾ ಹೋಗಿದ್ದೇಕೆ? | Virat Kohli & Anushka

Share This Article

ತಣ್ಣೀರಿನಲ್ಲಿ ಈಜುವುದರಿಂದಾಗು ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದಾಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ತಾಮ್ರದ ಪಾತ್ರೆಯಲ್ಲಿ ನೀರನ್ನು ಇಡುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ನೀರಿನ ರುಚಿಯನ್ನು ಸುಧಾರಿಸುವುದಲ್ಲದೆ…

ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ತುಪ್ಪವನ್ನು ತಿನ್ನಲೇ ಬಾರದು ಗೊತ್ತಾ? ghee benefits and risks

ಬೆಂಗಳೂರು: ( ghee benefits and risks) ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು.  ತುಪ್ಪ ಹಲವು…