More

    ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಹೊರಟಿರುವ ಶಾಸಕಿ ಅಂಜಲಿ ನಿಂಬಾಳ್ಕರ್​; ಖಾನಾಪುರ ಕ್ಷೇತ್ರದ ಒಳಿತಿಗಾಗಿ ಪತಿಯೊಂದಿಗೆ ಪ್ರಾರ್ಥನಾ ನಡಿಗೆ

    ಕೋಲಾರ: ಖಾನಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕಿ ಅಂಜಲಿ ನಿಂಬಾಳ್ಕರ್​ ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಕೋಲಾರ ಹೆದ್ದಾರಿ ಮೂಲಕ ಸಾಗಿದ್ದಾರೆ.

    ಶನಿವಾರ (ಜ.11)ದಿಂದ ಅವರು ತಮ್ಮ ಪತಿ ಹೇಮಂತ್ ನಿಂಬಾಳ್ಕರ್​, ಕುಟುಂಬ ಹಾಗೂ ಸಂಬಂಧಿಕರೊಟ್ಟಿಗೆ ಬೆಂಗಳೂರಿನಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ.

    ಪಾದಯಾತ್ರೆ ಪ್ರಾರಂಭಕ್ಕೂ ಮೊದಲು ಟ್ವೀಟ್ ಮಾಡಿದ್ದ ಅವರು, ಸಶಕ್ತ ವರ್ತಮಾನಕ್ಕಾಗಿ, ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನಾ ನಡಿಗೆ ಪ್ರಾರಂಭಿಸುತ್ತಿದ್ದೇನೆ. ಖಾನಾಪುರ ಕ್ಷೇತ್ರದ ಒಳಿತಿಗಾಗಿ ಇಂದಿನಿಂದ ತಿರುಪತಿಗೆ ಪಾದಯಾತ್ರೆ ಪ್ರಾರಂಭಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಹಾಗೇ ಕೆಲವು ಫೋಟೋಗಳನ್ನೂ ಪೋಸ್ಟ್​ ಮಾಡಿದ್ದರು.
    ಅಂಜಲಿ ನಿಂಬಾಳ್ಕರ್​ ಜತೆಗೆ ಅವರ ಸೋದರರು, ಬೆಂಬಲಿಗರು ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts