ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿ ಬಾಳಲ್ಲಿ ವಿಧಿಯಾಟ: ಕಾರು ಪ್ರಪಾತಕ್ಕೆ ಉರುಳಿ ದುರಂತ

ಡೆಹ್ರಾಡೂನ್​: ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿಯ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆಗಾಗಿ ಬಟ್ಟೆಕೊಳ್ಳಲು ಹೋಗುತ್ತಿದ್ದ ವೇಳೆ ಕಾರು ಹಳ್ಳಕೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಪಿಂಕಿ (25) ಪ್ರತಾಪ್​ ಸಿಂಗ್​​ (40), ದೇವಿ (36), ವಿಜಯ್​​ (15) ಮತ್ತು ಮಂಜು(12) ಸಾವನ್ನಪ್ಪಿದ್ದಾರೆ. ಮೃತ ಪಿಂಕಿ ಮದುವೆಗಾಗಿ ಬಟ್ಟೆ ಕೊಂಡುಕೊಳ್ಳಲು ಕುಟುಂಬ ನಗರಕ್ಕೆ ಹೊರಟಿತ್ತು. ರಿಷಿಕೇಶ್​ ಮತ್ತು ಬದ್ರಿನಾಥ್​ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ಟೋಟಘಾಟಿ ಎಂಬಲ್ಲಿ ಇವರು ಚಲಿಸುತ್ತಿದ್ದ ಕಾರು ಪ್ರಪಾತಕ್ಕೆ ಬಿದ್ದಿದೆ. … Continue reading ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿ ಬಾಳಲ್ಲಿ ವಿಧಿಯಾಟ: ಕಾರು ಪ್ರಪಾತಕ್ಕೆ ಉರುಳಿ ದುರಂತ