ಸಮಾನತೆಯ ಸಂವಿಧಾನ ನೀಡಿದ ಅಂಬೇಡ್ಕರ್

Ambedkar gave a constitution of equality

ಗುಳೇದಗುಡ್ಡ: ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿವ ಸಂವಿಧಾನವನ್ನು ಡಾ.ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿದ್ದಾರೆ. ಇಂದು ಸಾಮಾನ್ಯ ಕುಟುಂಬದ ವ್ಯಕ್ತಿ ಐಎಎಸ್ ಮಾಡಿ ಜನರಿಗೆ ನ್ಯಾಯಕೊಡುವ ಸ್ಥಿತಿಯಲ್ಲಿದ್ದಾನೆ. ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಎಬಿವಿಪಿ ಕರ್ನಾಟಕ ಉತ್ತರ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಹೇಳಿದರು.

blank

ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಸಮಾನತೆಯ ಸಾಗರ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಅಂಬೇಡ್ಕರ್ ಅವರು ತಾವು ಅನುಭವಿಸಿದ ಅಸ್ಪಶ್ಯತೆಯನ್ನು ಮುಂದೆ ನಮ್ಮ ಜನರು ಅನುಭವಿಸಬಾರದು ಎಂದು ಸಂವಿಧಾನದಲ್ಲಿ ಸಮಾನತೆ, ಸೋದರತೆಯನ್ನು ಅಳವಡಿಸಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳು ನಮಗೆಲ್ಲರಿಗೂ ಆದರ್ಶವಾಗಬೇಕು ಎಂದರು.

ಡಾ. ಚಂದ್ರಕಾಂತ ಜವಳಿ ಮಾತನಾಡಿ, ಅಂಬೇಡ್ಕರ್ ಅವರ ಬಾಲ್ಯ ಜೀವನ ನೋಡಿದಾಗ ಅವರು ಅಸ್ಪಶ್ಯತೆ ಅನುಭವಿಸಿದ್ದನ್ನು ನಾವು ನೋಡುತ್ತೇವೆ. ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಬೆಳೆದ ಅವರು, ಅಸ್ಪಶ್ಯತೆ ಹೋಗಲಾಡಿಸಲು ಪ್ರಯತ್ನಿಸಿದ್ದರು ಎಂದರು.

ಉತ್ತರ ಕರ್ನಾಟಕ ಎಬಿವಿಪಿ ರಾಜ್ಯ ಸಮಿತಿ ಸದಸ್ಯ ಪ್ರಥಮೇಶ ವಾಘ್ಮೋಡೆ, ನಗರ ಅಧ್ಯಕ್ಷ ರವಿ ಉಪ್ಪಾರ, ಕಾರ್ಯದರ್ಶಿ ಅಮಿತ ವಾಳದ, ದೀಪಕ ರಾಠೋಡ, ವಿಶ್ವನಾಥ ಕಳ್ಳಿಗುಡ್ಡ, ಮೈತ್ರೇಯಿ ರಾಜನಾಳ, ಸಮರ್ಥ ಜಿರ್ಲಿ, ಈರಣ್ಣ ಹಡಪದ, ಪವನ ಉಂಕಿ, ಗೌರೀಶ ಅಂಗಡಿ, ಪ್ರಥಮೇಶ ಪವಾರ, ಪ್ರತೀಕ ಅಂಗಡಿ, ರೂಪಾ ಸೊಪ್ಪಿಮಠ, ಪ್ರವೀಣ ರಾಠೋಡ, ಆಕಾಶ ಚವಾಣ, ಶಂಕ್ರಮ್ಮ ಮುರಗೋಡ, ನಾಗರತ್ನ ರಂಜಣಗಿ, ದೃಶಾಂತ ಹೂಲಗೇರಿ, ಸಂಜನಾ ಚಂದನ್ನವರ, ಸೌಂದರ್ಯ ಆರೂಟಗಿ, ಸಂಜನಾ ಬಾಪೂರಿ, ಸಂಗೀತ ಶಿರೂರ, ಸಂಜನಾ ಚಂದಾಪೂರ, ಮಂಜುಳಾ ರಾಠೋಡ ಮತ್ತಿತರರಿದ್ದರು.

Share This Article
blank

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಮಾರ್ಗ.. ಒಮ್ಮೆ ಟ್ರೈ ಮಾಡಿ | Lizards

Lizards: ಹಲ್ಲಿಗಳು ಹೆಚ್ಚಾಗಿ ಮನೆಯ ಗೋಡೆಗಳ ಮೇಲೆ ಮತ್ತು ಅಡುಗೆಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲ್ಲಿಗಳ ಬಗ್ಗೆ…

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

blank