ಜಲ ವಿವಾದ.. ಸರ್ವಪಕ್ಷಗಳ ಸಭೆಗೆ ತೀರ್ಮಾನ: ಕೈ ಕಟ್ಟಿ ಹಾಕುವ ತಂತ್ರ ಹೆಣೆದ ಬೊಮ್ಮಾಯಿ; ಮಾಸಾಂತ್ಯಕ್ಕೆ ಮತ್ತೊಂದು ಸಭೆ

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಅಂತಾರಾಜ್ಯ ಜಲ ವಿವಾದಗಳ ಕುರಿತು ರ್ಚಚಿಸಲು ಫೆಬ್ರವರಿ ಮೊದಲ ವಾರ ಸರ್ವಪಕ್ಷಗಳ ಸಭೆ ಕರೆಯಲು ರಾಜ್ಯ ಸರ್ಕಾರ ತೀರ್ವನಿಸಿದೆ. ಆ ಮೂಲಕ ಪ್ರತಿಪಕ್ಷ ಕಾಂಗ್ರೆಸ್​ನ ‘ಕೈ’ ಕಟ್ಟಿಹಾಕುವ ತಂತ್ರಗಾರಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಣೆದಿದ್ದು, ಮೇಕೆದಾಟು ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ವಿಫಲಗೊಳಿಸಲು ಮುಂದಾಗಿದ್ದಾರೆ. ಕರೊನಾ ಸೋಂಕು ಉಲ್ಬಣಿಸಿದ್ದರಿಂದ ‘ಮೇಕೆದಾಟು ಪಾದಯಾತ್ರೆ’ಯನ್ನು ಕಾಂಗ್ರೆಸ್ ಮುಂದೂಡಿದ್ದು, ಸೋಂಕು ಇಳಿಮುಖವಾಗುತ್ತಲೇ ಮತ್ತೆ ಚಳವಳಿಗೆ ಧುಮುಕಲು ಚಿಂತನೆ ನಡೆಸಿದೆ. ಅಂತಾರಾಜ್ಯ ಜಲ ವಿವಾದಗಳ … Continue reading ಜಲ ವಿವಾದ.. ಸರ್ವಪಕ್ಷಗಳ ಸಭೆಗೆ ತೀರ್ಮಾನ: ಕೈ ಕಟ್ಟಿ ಹಾಕುವ ತಂತ್ರ ಹೆಣೆದ ಬೊಮ್ಮಾಯಿ; ಮಾಸಾಂತ್ಯಕ್ಕೆ ಮತ್ತೊಂದು ಸಭೆ