ಭಕ್ತಿಪ್ರಧಾನ ‘ಜಗನ್ಮಾತೆ ಅಕ್ಕಮಹಾದೇವಿ’: ಮೊದಲ ಹಂತದ ಹಾಡುಗಳ ಚಿತ್ರೀಕರಣ ಮುಗಿಸಿದ ಚಿತ್ರತಂಡ

blank

ಬೆಂಗಳೂರು: 12ನೇ ಶತಮಾನದ ವಚನ ಸಾಹಿತ್ಯ ಚಳವಳಿಯಲ್ಲಿ ವಚನಗಾರ್ತಿ ಅಕ್ಕಮಹಾದೇವಿ ಪಾತ್ರ ಮಹತ್ವವಾದುದು. ಇವರ ಜೀವನ, ಸಂದೇಶ, ವಿಚಾರಗಳನ್ನು ಆಧರಿಸಿ ಕನ್ನಡದಲ್ಲಿ ಈ ಹಿಂದೆ ಹಲವು ಚಿತ್ರಗಳು ಮೂಡಿಬಂದಿವೆ. ಇದೀಗ ಇದಕ್ಕೆ ಹೊಸ ಸೇರ್ಪಡೆ ‘ಶ್ರೀ ಜಗನ್ಮಾತೆ ಅಕ್ಕಮಹಾದೇವಿ’. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿಯ ಕಥೆಯನ್ನು ಇಲ್ಲಿ ಹೇಳಲಾಗುತ್ತಿದೆ. ವಿಷ್ಣುಕಾಂತ್ ನಿರ್ದೇಶನದ ಜತೆಗೆ ನಿರ್ಮಾಣಕ್ಕೆ ಮುಂದಾಗಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಸುರಕ್ಷಾ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ ಗುಲ್ಬರ್ಗಾ, ಬೀದರ್, ಶ್ರೀಶೈಲ ಹಾಗೂ ಕಾಡುಗುಡ್ಡದ ಜಲಪಾತದ ಸುತ್ತಮುತ್ತ ಹಾಡುಗಳ ಚಿತ್ರೀಕರಣ ನಡೆಸಿದೆ. ಬಾಕಿ ವಚನಗಳ ದೃಶ್ಯಗಳ ಚಿತ್ರೀಕರಣ ಇನ್ನಷ್ಟೇ ಆರಂಭಿಸಬೇಕಿದೆ. ಬಸವಣ್ಣ ಹಾಗೂ ಅಕ್ಕಮಹಾದೇವಿ ರಚಿಸಿರುವ 21 ವಚನಗಳನ್ನು ಬಳಸಿಕೊಂಡು ವಿಷ್ಣುಕಾಂತ್ ಮೂರು ಹಾಡುಗಳನ್ನು ರಚಿಸಿರುವುದು ವಿಶೇಷ. ವಿಷ್ಣುಕಾಂತ್, ಸುರಕ್ಷಾ ಜತೆ ಭವ್ಯಾ, ಶ್ವೇತಾ, ಬಿರಾದಾರ್, ಡಾ. ಹೆಲನ್, ಪಲ್ಲಕ್ಕಿ ರಾಧಾಕೃಷ್ಣ, ತಬಲಾ ನಾಣಿ, ಸುಚೇಂದ್ರ ಪ್ರಸಾದ್, ಎಂ.ಪಾಟೀಲ್ ಕಲಾ ಬಳಗದಲ್ಲಿದ್ದಾರೆ. ಆರ್.ಪಳನಿ ಸೇನಾಪತಿ ಸಂಗೀತ, ರವಿ ಸುವರ್ಣ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ಹಾಗೂ ಅಮಿತ್ ಜವಳಕರ ಸಂಕಲನ ಚಿತ್ರಕ್ಕಿರಲಿದೆ.

Share This Article

ಖಾಲಿ ಹೊಟ್ಟೆಯಲ್ಲಿ ಒಂದು ಚಿಟಿಕೆ ಶುಂಠಿ ತಿಂದು, ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Ginger

Ginger: ಅಡುಗೆಯ ರುಚಿ ಹೆಚ್ಚಿಸಲು ನಾವು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತೇವೆ, ಅವುಗಳಲ್ಲಿ ಶುಂಠಿಯೂ…

ಸಣ್ಣ ಇರುವವರು ದಪ್ಪವಾಗಲು ಇಲ್ಲಿದೆ ಸುಲಭ ಮಾರ್ಗ: ಇಂತಹ ನ್ಯಾಚುರಲ್​​ ಆಹಾರ ಸೇವಿಸಿದ್ರೆ ಸಾಕು| Weight Gain

Weight Gain: ಸಾಮಾನ್ಯವಾಗಿ ದಪ್ಪಗಿರುವ ವ್ಯಕ್ತಿಗಳು ಸಣ್ಣದಾಗಲು ಕಷ್ಟ ಎಂದು ಬಹುತೇಕರು ಪರಿಗಣಿಸುತ್ತಾರೆ. ಆದರೆ, ಸಣಕಲು…

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…