ಮತ್ತೆ ಕರೊನಾ ಕಟ್ಟೆಚ್ಚರ; 2ನೇ ಅಲೆ ತಡೆಗೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿ

ಬೆಂಗಳೂರು: ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿ ಕರೊನಾ ವೈರಸ್​ನ ಹೊಸ ರೂಪಾಂತರಿ ಪ್ರಭೇದ ಪತ್ತೆಯಾಗಿರುವುದು ಹಾಗೂ ಕೇರಳದಲ್ಲೂ ಸೋಂಕು ಪ್ರಕರಣ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲೂ ಕೋವಿಡ್ ನಿಯಮಾವಳಿಗಳನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಗಡಿ ಪ್ರದೇಶದಲ್ಲಿ ನಿಗಾ ಇಡಲಾಗಿದ್ದು, ಒಂದೊಮ್ಮೆ ಪ್ರಕರಣ ಮಿತಿಮೀರಿದಲ್ಲಿ ಮತ್ತೆ ಲಾಕ್​ಡೌನ್ ಜಾರಿಗೊಳಿಸುವ ಕುರಿತೂ ಸರ್ಕಾರ ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ. ಕರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಜನರು ನಿಯಮ ಪಾಲಿಸುತ್ತಿಲ್ಲ. ಮದುವೆ, ಸಭೆ, ಸಮಾರಂಭ, ಪಾದಯಾತ್ರೆ, ಜಾತ್ರೆಗಳಲ್ಲೂ ಮಾಸ್ಕ್ ನಾಪತ್ತೆಯಾಗಿದೆ. … Continue reading ಮತ್ತೆ ಕರೊನಾ ಕಟ್ಟೆಚ್ಚರ; 2ನೇ ಅಲೆ ತಡೆಗೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿ