ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆಗೆ ಮರುಗಿದ ನೆಟ್ಟಿಗರು…

ಬೆಂಗಳೂರು: ಇಂದು ಮಧ್ಯಾಹ್ನದ ಸುಮಾರಿಗೆ ಹೊರಬಿದ್ದ ಆಘಾತಕಾರಿ ಸುದ್ದಿ ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಆತ್ಮಹತ್ಯೆಯದ್ದು. ಇದು ಬರೀ ಅವರ ಕುಟುಂಬ, ಆಪ್ತವರ್ಗ ಮಾತ್ರವಲ್ಲದೆ ಬಹಳಷ್ಟು ಸಾರ್ವಜನಿಕರ ಹೃದಯವನ್ನೂ ಕಲುಕಿದೆ. ಕ್ರೆಸೆಂಟ್ ರಸ್ತೆಯ ಅಪಾರ್ಟ್​ಮೆಂಟ್​​ನಲ್ಲಿ ವಾಸವಿದ್ದ ಡಾ.ನೀರಜ್​ ಅವರ ಪತ್ನಿ ಡಾ.ಸೌಂದರ್ಯ, ತಮ್ಮ 9 ತಿಂಗಳ ಮಗುವನ್ನು ಇನ್ನೊಂದು ಕೊಠಡಿಯಲ್ಲಿ ಬಿಟ್ಟು ತಾವು ವೇಲ್​ ಮೂಲಕ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. … Continue reading ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆಗೆ ಮರುಗಿದ ನೆಟ್ಟಿಗರು…