ನನ್ನ ಹೆಸರು ಹಾಳು ಮಾಡಬೇಡಿ! ಸಮಸ್ಯೆ ಬೇರೇನೇ ಇದೆ: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ನಟಿ ಪವಿತ್ರಲಕ್ಷ್ಮಿ ಕಿಡಿ | Plastic Surgery

blank

Plastic Surgery: ತಮಿಳಿನ ‘ಓ ಕಾದಲ್ ಕಣ್ಮಣಿ’ (2015) ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ನಟಿ ಪವಿತ್ರಲಕ್ಷ್ಮಿ, ತನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಇದೀಗ ತೀವವ್ರ ಕಿಡಿಕಾರಿದ್ದಾರೆ.

blank

ಇದನ್ನೂ ಓದಿ: 13,500 ಕೋಟಿ ರೂ.ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ| Modi

ಪ್ಲಾಸ್ಟಿಕ್ ಸರ್ಜರಿ ಆರೋಪ

ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಹಿನ್ನೆಲೆ ನೋಡಲು ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದೆಲ್ಲವೂ ಕಾಸ್ಮೆಟಿಕ್​ ಸರ್ಜರಿ ಪ್ರಭಾವ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ತನ್ನ ವಿರುದ್ಧ ಕೇಳಿಬಂದ ಸುಳ್ಳು ಸುದ್ದಿ, ಟ್ರೋಲ್​, ಟೀಕೆಗಳಿಗೆ ಕಡೆಗೂ ಪ್ರತಿಕ್ರಿಯಿಸಿರುವ ಪವಿತ್ರಲಕ್ಷ್ಮಿ, “ನನ್ನ ದೇಹದಲ್ಲಿ ಆದ ಬದಲಾವಣೆ ಮತ್ತು ತೂಕ ಹೆಚ್ಚಳದಿಂದಾಗಿ ಕೆಲವರು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ, ಇದು ನಿಜವಲ್ಲ. ಪ್ಲಾಸ್ಟಿಕ್ ಸರ್ಜರಿಯಿಂದ ಹೀಗಾಗಿಲ್ಲ. ಈ ಹಿಂದೆಯೂ ಹಲವು ಬಾರಿ ಇದನ್ನು ವಿವರಿಸಲು ಪ್ರಯತ್ನಿಸಿದ್ದೇನೆ. ಪ್ಲಾಸ್ಟಿಕ್ ಸರ್ಜರಿಗೆ ನಾನೆಂದಿಗೂ ಒಳಗಾಗಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ” ಎಂದಿದ್ದಾರೆ.

ಇದನ್ನೂ ಓದಿ: ಕಮೆಂಟರಿ ಮಾಡೋರಿಗೆ ಕೋಟಿಗಟ್ಟಲೇ ಹಣ! ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿ ಇಲ್ಲಿದೆ ನೋಡಿ | IPL 2025

ವದಂತಿಗಳ ವಿರುದ್ಧ ಕಿಡಿ

“ಸುಖಾಸುಮ್ಮನೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ. ಕೆಲವು ಕಾಮೆಂಟ್‌ಗಳು ತುಂಬಾ ಕೆಟ್ಟದಾಗಿದ್ದು, ಅದನ್ನು ಹೇಳಲು ಕಷ್ಟಸಾಧ್ಯ. ದೇಹದಲ್ಲಿನ ಬದಲಾವಣೆಗೆ ಅನಾರೋಗ್ಯವೇ ಕಾರಣ. ಒಂದು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇನೆ. ಹೀಗಾಗಿ ವ್ಯತ್ಯಾಸಗಳು ಕಾಣುತ್ತಿವೆ. ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಗುಣಮುಖಳಾಗಿದ್ದೇನೆ. ದಯವಿಟ್ಟು ನಿಮ್ಮ ಮನರಂಜನೆಗಾಗಿ ನನ್ನ ಬಗ್ಗೆ ಊಹಾಪೋಹಗಳನ್ನು ಬರೆಯಬೇಡಿ. ನನ್ನ ಬಗ್ಗೆ ವದಂತಿಗಳನ್ನು ಸೃಷ್ಟಿಸಬೇಡಿ. ನನಗೆ ನನ್ನದೇ ಆದ ಜೀವನವಿದೆ. ದಯವಿಟ್ಟು ನನ್ನ ಹೆಸರನ್ನು ಹಾಳು ಮಾಡಬೇಡಿ. ನನ್ನ ಭವಿಷ್ಯಕ್ಕೆ ಕೊಡಲಿ ಹಾಕಬೇಡಿ” ಎಂದು ಮನವಿ ಮಾಡಿದ್ದಾರೆ.

 

‘ಓ ಕಾದಲ್ ಕಣ್ಮಣಿ’ ಚಿತ್ರದಲ್ಲಿ ನಟ ದುಲ್ಕರ್ ಸಲ್ಮಾನ್ ಸಹೋದ್ಯೋಗಿಯಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಪವಿತ್ರ, ಅದೇ ವರ್ಷ, ಮಿಸ್ ಮದ್ರಾಸ್​ ಕಿರೀಟ ಮುಡಿಗೇರಿಸಿಕೊಂಡರು. ಕೇವಲ ಒಂದು ವರ್ಷದಲ್ಲಿ ನಯಿ ಶೇಖರ್ (ತಮಿಳು), ಉಲ್ಲಾಸಂ (ಮಲಯಾಳಂ), ಮತ್ತು ಇನ್ವಿಸಿಭಮ್ (ತಮಿಳು, ಮಲಯಾಳಂ) ಸಿನಿಮಾಗಳಲ್ಲಿ ಕಾಣಿಸಿಕೊಂಡ ಈ ಚೆಲುವೆ, ಜಿಗಿರಿ ದೋಸ್ತು ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮದ್ರಾಸ್ ಚಿತ್ರಗಳಲ್ಲಿಯೂ ಮಿಂಚಿದ್ದಾರೆ,(ಏಜೆನ್ಸೀಸ್).

ಕಮೆಂಟರಿ ಮಾಡೋರಿಗೆ ಕೋಟಿಗಟ್ಟಲೇ ಹಣ! ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿ ಇಲ್ಲಿದೆ ನೋಡಿ | IPL 2025

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…