ವಿಜಯವಾಣಿ ಸುದ್ದಿಜಾಲ ಬೆಂಗಳೂರು
“ಹೊಂದಿಸಿ ಬರೆಯಿರಿ’ ಚಿತ್ರದ ಬಳಿಕ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಆ್ಯಕ್ಷನ್&ಕಟ್ ಹೇಳುತ್ತಿರುವ ಸಿನಿಮಾ “ತೀರ್ಥರೂಪ ತಂದೆಯವರಿಗೆ’. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಟಾಲಿವುಡ್ನಲ್ಲಿ “ಪ್ರಿಯಮೈನ ನಾನ್ನಕು’ ಎಂದು ಶೀರ್ಷಿಕೆ ಇಡಲಾಗಿದೆ. ವರಮಹಾಲಕ್ಷಿ$್ಮ ಹಬ್ಬದಂದು ಸಿನಿಮಾ ಸೆಟ್ಟೇರಿದ್ದು, ಸದ್ಯ ಮೂರು ಶೆಡ್ಯೂಲ್ ಶೂಟಿಂಗ್ ಪೂರ್ಣಗೊಳಿಸಿ, ನಾಲ್ಕನೇ ಹಂತದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ. ತೆಲುಗಿನ “ಗುಪ್ಪೆಡಂತ ಮನಸು’ ಧಾರಾವಾಹಿ ಮತ್ತು “ಗೀತಾ ಶಂಕರ್’ ಸಿನಿಮಾದಲ್ಲಿ ನಟಿಸಿರುವ ನಿಹಾರ್ ಮುಖೇಶ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡದಲ್ಲಿ ಡೆಬ್ಯೂ ಮಾಡುತ್ತಿದ್ದಾರೆ. ಆದರೆ, ಚಿತ್ರತಂಡ ಇದುವರೆಗೂ ನಾಯಕಿ ಯಾರು ಎಂಬುದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇದೀಗ ನಾಯಕಿಯಾಗಿ “ಲವ್ ಮಾಕ್ಟೇಲ್’, “ಲವ್ 360′ ಖ್ಯಾತಿಯ ರಚನಾ ಇಂದರ್ ಆಯ್ಕೆಯಾಗಿದ್ದು, ಪೋಸ್ಟರ್ ಮೂಲಕ ಚಿತ್ರತಂಡ ಘೋಷಣೆ ಮಾಡಿದೆ.
ಜೂನ್ನಲ್ಲಿ ಸಿನಿಮಾ ತೆರೆಗೆ
“ತೀರ್ಥರೂಪ ತಂದೆಯವರಿಗೆ’ ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಜಗನ್ನಾಥ್, “ಈಗಾಗಲೇ ಮೂರು ಹಂತಗಳಲ್ಲಿ ಶೇಕಡಾ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸಂಕ್ರಾಂತಿ ಹಬ್ಬದ ನಂತರ ನಾಲ್ಕನೇ ಶೆಡ್ಯೂಲ್ ಪ್ರಾರಂಭಿಸಿ, ಮೂಡಿಗೆರೆ, ಉತ್ತರಭಾರತದ ಹಿಮಾಚಲ ಪ್ರದೇಶ ಮತ್ತು ಗುವಾಹಟಿಯಲ್ಲಿ ಶೂಟಿಂಗ್ ನಡೆಸಲಿದ್ದೇವೆ. ಶ್ರೀಮಂತ ಕುಟುಂಬದ ತುಂಟಾಟದ ಮುದ್ದು ಅಪ್ಸರಾಳ ಪಾತ್ರಕ್ಕೆ ರಚನಾ ಇಂದರ್ ಸೂಕ್ತ ಅಂತನ್ನಿಸಿ, ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡೆವು’ ಎಂದು ಮಾಹಿತಿ ನೀಡುತ್ತಾರೆ. ನಿಹಾರ್, ರಚನಾ ಜತೆ ರಾಜೇಶ್ ನಟರಂಗ, ಸಿತಾರಾ, ಗಿರೀಶ್ ಶಿವಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಫೀಲ್ಗುಡ್ ಸಿನಿಮಾ:
“ಅಕ್ಷರಾ’ ಪಾತ್ರದ ಬಗ್ಗೆ ನಾಯಕಿ ರಚನಾ, “ಅಪ್ಪನ ಆಸೆ ಈಡೇರಿಸಲು ಮುಂದಾಗುವ ಹುಡುಗಿಗೆ ಏನೆಲ್ಲ ಸವಾಲುಗಳು ಎದುರಾಗುತ್ತವೆ? ಎಂಬುದು ನನ್ನ ಟ್ರಾ$್ಯಕ್ನಲ್ಲಿ ಸಾಗುತ್ತದೆ. ಕಥೆ, ನನ್ನ ಪಾತ್ರ ತುಂಬ ಚೆನ್ನಾಗಿದೆ. ಕೌಟುಂಬಿಕ, ಭಾವನಾತ್ಮಕ ಅಂಶಗಳು ಚಿತ್ರದಲ್ಲಿವೆ. ಒಂದು ಫೀಲ್ ಗುಡ್ ಸಿನಿಮಾ. ನನ್ನ ಭಾಗದ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಇನ್ನೆರಡು ಹಂತದ ಶೂಟಿಂಗ್ ನಡೆಯಬೇಕಿದೆ’ ಎಂದು ಹೇಳಿಕೊಳ್ಳುತ್ತಾರೆ. “ತೀರ್ಥರೂಪ ತಂದೆಯವರಿಗೆ’ ಜತೆಗೆ ರಚನಾ “ನಾನು ಮತ್ತು ಗುಂಡ 2′ ಮತ್ತು “ೈರ್್ಲೆ$’ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.