Actress Ankita Amar Interview; ಭಾರ್ಗವ ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ನಟಿ ಅಂಕಿತಾ ಅಮರ್​ ಆಯ್ಕೆ

blank

| ಹರ್ಷವರ್ಧನ್​ ಬ್ಯಾಡನೂರು

blank

ನಾಯಕ ಉಪೇಂದ್ರ, ನಿರ್ದೇಶಕ ನಾಗಣ್ಣ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್​ನಲ್ಲಿ ಕೆಲ ದಿನಗಳ ಹಿಂದಷ್ಟೇ “ಭಾರ್ಗವ’ ಚಿತ್ರವನ್ನು ಘೋಷಿಸಲಾಗಿತ್ತು. ಇದೀಗ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ “ನಮ್ಮನೆ ಯುವರಾಣಿ’ ಧಾರಾವಾಹಿ ಮತ್ತು “ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಖ್ಯಾತಿಯ ನಟಿ ಅಂಕಿತಾ ಅಮರ್​ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಜಯವಾಣಿ ಜತೆ ಸಂತಸ ಹಂಚಿಕೊಂಡ ಅವರು, “”ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ಉಪೇಂದ್ರ ಸರ್​ ನೋಡಿದ್ದರಂತೆ. “ಭಾರ್ಗವ’ ಕಥೆ ಕೇಳುವಾಗ, ನಾಯಕಿಯ ಪಾತ್ರದ ಬಗ್ಗೆ ತಿಳಿದು, ನಿರ್ದೇಶಕರಾದ ನಾಗಣ್ಣ ಸರ್​ಗೆ ಈ ಪಾತ್ರಕ್ಕೆ ನನ್ನನ್ನು ಸೂಚಿಸಿದ್ದಾರೆ. ನಾನೂ ಕಥೆ ಕೇಳಿದ್ದೇನೆ. ಪರ್ಫಾಮೆನ್ಸ್​​ ಪ್ರಧಾನ ಪಾತ್ರ ಮತ್ತು ಚಿತ್ರ’ ಎಂದು ಮಾಹಿತಿ ನೀಡುತ್ತಾರೆ.

ಜಸ್ಟ್​ ಮ್ಯಾರಿಡ್​, ಸತ್ಯ ಸನ್​ ಆಫ್​ ಹರಿಶ್ಚಂದ್ರ!

Actress Ankita Amar Interview; ಭಾರ್ಗವ ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ನಟಿ ಅಂಕಿತಾ ಅಮರ್​ ಆಯ್ಕೆ
ಅಂದಹಾಗೆ, “ಇಬ್ಬನಿ ತಬ್ಬಿದ ಇಳೆಯಲಿ’ ಬಳಿಕ ಅಂಕಿತಾ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ನಿರ್ಮಿಸುತ್ತಿರುವ, ಸಂಗೀತ ನಿರ್ದೇಶಕಿ ಸಿ.ಆರ್​. ಬಾಬಿ ಚೊಚ್ಚಲ ಬಾರಿಗೆ ಆ್ಯಕ್ಷನ್​&ಕಟ್​ ಹೇಳುತ್ತಿರುವ “ಜಸ್ಟ್​ ಮ್ಯಾರಿಡ್​’ ಚಿತ್ರದಲ್ಲಿ ಶೈನ್​ ಶೆಟ್ಟಿ ಜತೆ ನಟಿಸುತ್ತಿದ್ದಾರೆ. ಹಾಗೇ ಸಚಿನ್​ ವಾಲಿ ನಿರ್ದೇಶಿಸುತ್ತಿರುವ, ನಿರೂಪ್​ ಭಂಡಾರಿ ನಾಯಕನಾಗಿರುವ “ಸತ್ಯ ಸನ್​ ಆಫ್​ ಹರಿಶ್ಚಂದ್ರ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಎರಡೂ ಚಿತ್ರಗಳ ಶೂಟಿಂಗ್​ ಮತ್ತು ಡಬ್ಬಿಂಗ್​ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್​&ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ. ಅದರ ಬೆನ್ನಲ್ಲೇ ಇದೀಗ “ಭಾರ್ಗವ’ ತಂಡದ ಭಾಗವಾಗಿದ್ದಾರೆ ಅಂಕಿತಾ.

ಓದಿನಲ್ಲೂ ಬಿಜಿ

Actress Ankita Amar Interview; ಭಾರ್ಗವ ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ನಟಿ ಅಂಕಿತಾ ಅಮರ್​ ಆಯ್ಕೆ
“ಸಿನಿಮಾಗಳಲ್ಲಿ ಬಿಜಿಯಾಗಿರುವ ಕಾರಣ ಸದ್ಯ ಮತ್ತೆ ಸೀರಿಯಲ್​ನಲ್ಲಿ ನಟಿಸುವ ಸಾಧ್ಯತೆ ಇಲ್ಲ’ ಎನ್ನುವ ಅವರು, ನಟನೆಯ ಜತೆಗೆ ಶಿಕ್ಷಣವನ್ನೂ ಮುಂದುವರಿಸಿದ್ದಾರೆ. “ಚೈಲ್ಡ್​ ಸೈಕಾಲಜಿಯಲ್ಲಿ ಮಾಸ್ಟರ್ಸ್​ ಓದುತ್ತಿದ್ದೇನೆ ಆ ಬಳಿಕ ಪಿಎಚ್​ಡಿ ಮಾಡಬೇಕು ಅಂತಂದುಕೊಂಡಿದ್ದೇನೆ. ಸೈಕಾಲಜಿ ನಟನೆಗೂ ತುಂಬ ಸಹಕಾರಿಯಾಗಿದೆ. ಒಂದು ಪಾತ್ರವನ್ನು ಅರ್ಥ ಮಾಡಿಕೊಳ್ಳಲು, ಅಧ್ಯಯನ ಮಾಡಿ, ಪೋಷಿಸಲು ಸೈಕಾಲಜಿಯಿಂದ ಸಹಾಯವಾಗುತ್ತಿದೆ’ ಎನ್ನುತ್ತಾರೆ.

ಎರಡು ಶೇಡ್​ಗಳಲ್ಲಿ ಉಪ್ಪಿ

Actress Ankita Amar Interview; ಭಾರ್ಗವ ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ನಟಿ ಅಂಕಿತಾ ಅಮರ್​ ಆಯ್ಕೆ
“ಕಬ್ಜಾ’, “ಯುಐ’, “45′ ಸಿನಿಮಾಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಉಪೇಂದ್ರ “ಭಾರ್ಗವ’ ಚಿತ್ರದಲ್ಲಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಮಕಥೆಯ ಜತೆಗೆ ಕೌಟುಂಬಿಕ ಮೌಲ್ಯ, ಸಂಬಂಧಗಳಿಗೆ ಹೆಚ್ಚು ಮಹತ್ವವಿದ್ದು, ಆ್ಯಕ್ಷಮ್​, ಕಾಮಿಡಿ ಜತೆಗೆ ಮಾಸ್​ ಅಂಶಗಳೂ ಇರುವ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್​ ಚಿತ್ರವಿದು. ಜೂನ್​ನಿಂದ “ಭಾರ್ಗವ’ ಶೂಟಿಂಗ್​ ಪ್ರಾರಂಭವಾಗಲಿದೆ. ಅರ್ಜುನ್​ ಜನ್ಯ ಸಂಗೀತ, ರಾಜರತ್ನಂ ಛಾಯಾಗ್ರಹಣ ಮತ್ತು ಬಿ.ಎ. ಮಧು ಸಂಭಾಷಣೆಯಲ್ಲಿ ಸಿನಿಮಾ ಮೂಡಿಬರಲಿದೆ.

Actress Ankita Amar Interview; ಭಾರ್ಗವ ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ನಟಿ ಅಂಕಿತಾ ಅಮರ್​ ಆಯ್ಕೆ
ನಾಯಕಿಯ ಪಾತ್ರಕ್ಕೆ ಕನ್ನಡ ಚೆನ್ನಾಗಿ ಮಾತನಾಡುವಂತಹ ಕನ್ನಡದ ಹುಡುಗಿಯೇ ಬೇಕು ಅಂತ ಹುಡುಕುತ್ತಿದ್ದೆವು. ಆಗ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಅಂಕಿತಾ ಅಮರ್​ ನಟನೆ ನೋಡಿ, ನಮ್ಮ ಚಿತ್ರಕ್ಕೂ ಅವರು ಒಪು$್ಪತ್ತಾರೆ ಅಂತನ್ನಿಸಿತು. ಜೂನ್​ನಲ್ಲಿ ಸಿನಿಮಾ ಸೆಟ್ಟೇರಲಿದೆ. ಮೂರು ಶೆಡ್ಯೂಲ್​ಗಳಲ್ಲಿ ಚಿತ್ರೀಕರಣ ನಡೆಸಲಿದ್ದೇವೆ.
– ನಾಗಣ್ಣ, ನಿರ್ದೇಶಕ

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank