ಬೆಂಗಳೂರು: ನನ್ನ ಹತ್ಯೆಗೆ ಕೆಲವರು ಸಂಚು ರೂಪಿಸಿದ್ದಾರೆ ಎಂದು ನಟ ಪ್ರಕಾಶ್ರಾಜ್ ಟ್ವೀಟ್ ಮಾಡಿದ್ದಾರೆ.
ಧರ್ಮ ದ್ರೋಹಿ ಹಾಗೂ ದೇಶ ದ್ರೋಹಿಗಳನ್ನು ಹತ್ಯೆ ಮಾಡೇ ಮಾಡುತ್ತೇವೆ ಎಂದು ಅನಾಮಧೇಯನೊಬ್ಬ ಪತ್ರ ಬರೆದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಅನಾಮಧೇಯ ಬರೆದಿರುವ ಪತ್ರದಲ್ಲಿ 15 ಮಂದಿ ಹೆಸರು ಇದೆ. ಅದರಲ್ಲಿ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿಜಗುಣಾನಂದ ಸ್ವಾಮೀಜಿ, ನಟ ಪ್ರಕಾಶ್ರಾಜ್, ಭಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್, ಹಿರಿಯ ಸಾಹಿತಿ ಚಂದ್ರಶೇಖರಪಾಟೀಲ್, ಅಗ್ನಿಶ್ರೀಧರ್, ನಟ ಚೇತನ್ ಸೇರಿದಂತೆ 15 ಮಂದಿ ಹೆಸರು ಉಲ್ಲೇಖಿಸಲಾಗಿದೆ.
ಇವರನ್ನು ಧರ್ಮ ಹಾಗೂ ದೇಶ ದ್ರೋಹಿಗಳೆಂದು ಉಲ್ಲೇಖಿಸಿ ಹತ್ಯೆ ಮಾಡುವುದಾಗಿ ಪತ್ರದಲ್ಲಿ ಬರೆದಿದ್ದಾರೆ. (ದಿಗ್ವಿಜಯ ನ್ಯೂಸ್)
To those who have threatened to kill me today “ಗಾಂಧಿಯನ್ನು ಕೊಂದವರೆ..
— Prakash Raj (@prakashraaj) January 29, 2020
ಗೌರಿಯನ್ನು ಕೊಂದವರೆ..
ಕೊಲ್ಲಬಲ್ಲಿರಿ ನನ್ನನ್ನೂ.
ಕೊಲ್ಲಬಲ್ಲಿರಿ ನನ್ನನ್ನೂ..ನನ್ನಂತ ಇನ್ನೂ ಹಲವರನ್ನೂ
ಆದರೆ ಕೊಲ್ಲಲಾರಿರಿ.. ನಮ್ಮ ಮನಃಸಾಕ್ಷಿಯನ್ನು..ನಮ್ಮ ಸಂವಿಧಾನವನ್ನು..ಎಲ್ಲರನ್ನೊಳಗೊಂಡ ಭಾರತೀಯತೆಯನ್ನು.. #ನೋಡೇಬಿಡೊಣ #IndiaAgainstCAA_NRC pic.twitter.com/6kzicD4K2m