ರಾಮಾರ್ಜುನ ಬಳಿಕ ಮತ್ತೊಮ್ಮೆ ಆ್ಯಕ್ಷನ್​-ಕಟ್​ ಹೇಳಲು ರೆಡಿಯಾದ ಆರಾಮ್ ಅನೀಶ್​

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು

“ಪೊಲೀಸ್​ ಕ್ವಾಟ್ರಸ್​’, “ನಮ್​ ಏರಿಯಾಲ್​ ಒಂದಿನ’, “ಅಕೀರ’, “ವಾಸು ನಾನ್​ ಪಕ್ಕಾ ಕಮರ್ಷಿಯಲ್​’ ಸೇರಿ ಹಲವು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿರುವ ಅನೀಶ್​ ತೇಜೇಶ್ವರ್​, 2021ರಲ್ಲಿ ತೆರೆಗೆ ಬಂದ “ರಾಮಾರ್ಜುನ’ ಮೂಲಕ ಡೈರೆಕ್ಟರ್​ ಕ್ಯಾಪ್​ ಧರಿಸಿದ್ದರು. ಇದೀಗ ನಾಲ್ಕು ವರ್ಷಗಳ ಗ್ಯಾಪ್​ ನಂತರ ಮತ್ತೊಮ್ಮೆ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಅವರು ನಾಯಕನಾಗಿದ್ದ “ಆರಾಮ್​ ಅರವಿಂದಸ್ವಾಮಿ’ ರಿಲೀಸ್​ ಆಗಿತ್ತು. ಕಳೆದ ವಾರವಷ್ಟೇ ಅವರು ಮುಖ್ಯ ಭೂಮಿಕೆಯಲ್ಲಿದ್ದ “ಫಾರೆಸ್ಟ್​’ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ ಅನೀಶ್​ ನಾಯಕ, ನಿರ್ದೇಶಕನಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ರಾಮಾರ್ಜುನ ಬಳಿಕ ಮತ್ತೊಮ್ಮೆ ಆ್ಯಕ್ಷನ್​-ಕಟ್​ ಹೇಳಲು ರೆಡಿಯಾದ ಆರಾಮ್ ಅನೀಶ್​

ಚಿತ್ರದ ಬಗ್ಗೆ, “ಜನ ನನ್ನಿಂದ ರೊಮ್ಯಾಂಟಿಕ್​ ಕಾಮಿಡಿ ಕಥೆಗಳನ್ನು ನಿರೀಸುತ್ತಾರೆ. ಅದಕ್ಕೆ ತಕ್ಕಂತಹ ಕಥೆಯನ್ನೇ ಮಾಡಿಕೊಂಡಿದ್ದೇನೆ. ಈ ಚಿತ್ರದಲ್ಲಿ ತಮಿಳಿನ “ಲವ್​ ಟುಡೇ’ ರೀತಿಯ ಇವತ್ತಿನ ಟ್ರೆಂಡ್​ಗೆ ತಕ್ಕಂತ ಮಾಸ್​ ಕಮರ್ಷಿಯಲ್​ ಜತೆಗೆ ಉತ್ತಮ ಕಂಟೆಂಟ್​ ಕೂಡ ಇರಲಿದೆ. “ರಾಮಾರ್ಜುನ’ ನಂತರ ಮತ್ತೆ ನಿರ್ದೇಶಿಸುತ್ತಿದ್ದೇನೆ. ಈ ಬಾರಿ ಇನ್ನೂ ದೊಡ್ಡ ಮಟ್ಟದಲ್ಲಿ, ಒಂದು ಉತ್ತಮ ಸಿನಿಮಾ ಮಾಡುವ ಉದ್ದೇಶ ನನ್ನದು’ ಎಂದು ಮಾಹಿತಿ ನೀಡುತ್ತಾರೆ ಅನೀಶ್​. ಅಂದಹಾಗೆ ಚಿತ್ರದ ಶೀರ್ಷಿಕೆ, ಫಸ್ಟ್​ ಲುಕ್​, ತಾರಾಗಣ ಸೇರಿ ತಂತ್ರಜ್ಞರ ಬಗ್ಗೆ ಇದೇ ತಿಂಗಳಲ್ಲಿ ಘೋಷಣೆ ಮಾಡುವುದಾಗಿ ಅನೀಶ್​ ಹೇಳಿಕೊಂಡಿದ್ದಾರೆ.

ರಾಮಾರ್ಜುನ ಬಳಿಕ ಮತ್ತೊಮ್ಮೆ ಆ್ಯಕ್ಷನ್​-ಕಟ್​ ಹೇಳಲು ರೆಡಿಯಾದ ಆರಾಮ್ ಅನೀಶ್​

ಕನ್ನಡ, ತೆಲುಗಿನಲ್ಲಿ ರಿಲೀಸ್​

ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಮೂಡಿಬರುತ್ತಿದೆ. ಈ ಬಗ್ಗೆ ಅನೀಶ್​, “ಕನ್ನಡ ಮತ್ತು ತೆಲುಗಿನಲ್ಲಿ ಎರಡು ಬಾರಿ ಚಿತ್ರೀಕರಣ ನಡೆಸುತ್ತಿದ್ದೇವೆ. ನನಗೆ ತೆಲುಗು ಭಾಷೆಯ ಮೇಲೂ ಹಿಡಿತವಿದೆ. ಹೀಗಾಗಿ ಡಬ್​ ಮಾಡಿ ಬಿಡುಗಡೆ ಮಾಡುವುದಕ್ಕಿಂತ ನೇರವಾಗಿ ಶೂಟಿಂಗ್​ ಮಾಡಿ ರಿಲೀಸ್​ ಮಾಡೋಣ ಅಂತ ಈ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ. ನಾನು ಈ ಚಿತ್ರದಲ್ಲಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಂದು ಟೀನೇಜ್​ ಹುಡುಗನ ಪಾತ್ರ ಮತ್ತೊಂದು ಲುಕ್​ ಕೂಡ ವಿಭಿನ್ನವಾಗಿರಲಿದೆ. ಈಗಾಗಲೇ ಶೇಕಡಾ 40ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕೆಲವೇ ತಿಂಗಳಲ್ಲಿ ಶೂಟಿಂಗ್​ ಪೂರ್ಣಗೊಳಿಸಿ, ರಿಲೀಸ್​ ದಿನಾಂಕ ಘೋಷಿಸಲಿದ್ದೇವೆ. ಎಂದು ಮಾಹಿತಿ ನೀಡುತ್ತಾರೆ ನಾಯಕ/ ನಿರ್ದೇಶಕ ಅನೀಶ್​ ತೇಜೇಶ್ವರ್.

Share This Article

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…

ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಭಾನುವಾರ ಹೀಗೆ ಮಾಡಿ ನೋಡಿ…devotional

devotional:ಭಾನುವಾರ ಸೂರ್ಯ ದೇವನನ್ನು ಪೂಜೆ ಮಾಡುವುದರಿಂದ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ…