ಹವ್ಯಾಸಿ ಕಲಾವಿದರಿಗೆ ಅಭಿನಯ ತರಬೇತಿ ಕಾರ್ಯಾಗಾರ

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗ ಕಲೆಯಲ್ಲಿ ಆಸಕ್ತಿವುಳ್ಳ ಹವ್ಯಾಸಿ ಕಲಾವಿದರಿಗಾಗಿ ಹತ್ತು ದಿನಗಳ ಅಭಿನಯ ಕಾರ್ಯಾಗಾರವನ್ನು ಜ. 22ರಿಂದ ಫೆ. 5ರ ವರೆಗೆ ಆಯೋಜಿಸಿದೆ.

ಹುಬ್ಬಳ್ಳಿಯ ಉದಯ ನಗರದ ಲಕ್ಷ್ಮೀನಾರಾಯಣ ಸಭಾಗ್ರಹದಲ್ಲಿ ಕಾರ್ಯಾಗಾರ ನಡೆಯಲಿದೆ. ಯುವಕರು, ವಿದ್ಯಾರ್ಥಿಗಳು ಹಾಗೂ ನೌಕರಸ್ಥರಿಗೆ ಅನುಕೂಲವಾಗುವ ಹಾಗೆ ಪ್ರತಿ ದಿನ ಸಂಜೆ 6ಕ್ಕೆ ತರಬೇತಿ ನೀಡಲಾಗುವುದು.

ಜ. 22ರಂದು ಸಂಜೆ 6ಕ್ಕೆ ಹಿರಿಯ ನಾಟಕಕಾರ ಹಾಗೂ ನಟ ಡಾ. ಗೋವಿಂದ ಮಣ್ಣೂರ ಅವರು ಕಾರ್ಯಾಗಾರ ಉದ್ಘಾಟಿಸುವರು, ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಅತಿಥಿಗಳಾಗಿ ಆಗಮಿಸುವರು. ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯತೆ ವಹಿಸುವರು.

ಭಾಗವಹಿಸಲು ಆಸಕ್ತರು ಸಂಸ್ಥೆಯ ಕಚೇರಿ, ಚೈತನ್ಯಧಾಮ, ರಾಜಾಜಿನಗರ, ದೇವಾಂಗಪೇಟ, ಹುಬ್ಬಳ್ಳಿ ಅಥವಾ ಕಾರ್ಯದರ್ಶಿ ವೀಣಾ ಅಠವಲೆ ಅವರನ್ನು ಸಂಪರ್ಕಿಸಲು ಕೋರಲಾಗಿದೆ.

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…