ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

ಆಯನೂರು (ಶಿವಮೊಗ್ಗ): ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದು ವಾಪಸ್​ ಬರುತ್ತಿದ್ದ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾದ ಘಟನೆ ಹೊಸನಗರ ತಾಲೂಕು ಗರ್ತಿಕೆರೆ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ. ಆಯನೂರಿನ ಕಲಾವತಿ (60), ಇವರ ಪುತ್ರ ಲೋಹಿತ್(34) ಮತ್ತು ಮೊಮ್ಮಗ ಶಶಾಂಕ್(8) ಮೃತರು. ಆಯನೂರಲ್ಲಿ ಗೂಡಂಗಡಿ ನಡೆಸುತ್ತಿದ್ದ ಲೋಹಿತ್ ತನ್ನ ಕಾರಿನಲ್ಲಿ ತಾಯಿ, ಅಕ್ಕ ಅಂಬಿಕಾ, ಭಾವ ರವಿಭಟ್, ಅಕ್ಕನ ಮಕ್ಕಳಾದ ಗಣೇಶ್ ಮತ್ತು ಶಶಾಂಕ್ ಅವರ ಜತೆ ಬುಧವಾರ ಬೆಳಗ್ಗೆ ಧರ್ಮಸ್ಥಳಕ್ಕೆ ತೆರಳಿದ್ದರು. ಮಂಜುನಾಥಸ್ವಾಮಿ ದರ್ಶನ … Continue reading ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!