ಹಗಲಲ್ಲೇ ಪಾನಮತ್ತನಾಗಿ ಬೈಕ್ ಓಡಿಸಿ ಪಾದಚಾರಿಗೆ ಗುದ್ದಿದ; ಮಹಿಳೆ ಸಾವು, ಸವಾರನ ಸ್ಥಿತಿಯೂ ಗಂಭೀರ..

ದಾವಣಗೆರೆ: ವ್ಯಕ್ತಿಯೊಬ್ಬ ಹಗಲಲ್ಲೇ ಪಾನಮತ್ತನಾಗಿ ಬೈಕ್​ ಓಡಿಸಿ ಮಹಿಳೆಯೊಬ್ಬರಿಗೆ ಗುದ್ದಿದ್ದು, ಆಕೆ ಸಾವಿಗೀಡಾಗಿದ್ದರೆ, ಅಪಘಾತಕ್ಕೆ ಕಾರಣವಾದ ದ್ವಿಚಕ್ರವಾಹನ ಸವಾರನ ಪರಿಸ್ಥಿತಿಯೂ ಗಂಭೀರವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಪಾನಮತ್ತ ಸವಾರ ಪ್ರದೀಪ್ ಎಂಬಾತನೇ ಆರೋಪಿ, ರೇಣುಕಮ್ಮ ಸಾವಿಗೀಡಾದ ಪಾದಚಾರಿ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ ಇಂದು ಈ ಅಪಘಾತ ನಡೆದಿದೆ. ಪ್ರದೀಪ್​ ಬೈಕ್​ ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಸಾವಿಗೀಡಾಗಿದ್ದರೆ, ಗಂಭೀರ ಗಾಯಗೊಂಡಿರುವ ಬೈಕ್ ಸವಾರನ ಪರಿಸ್ಥಿತಿ ಚಿಂತಾಜನಕವಾಗಿದೆ. ರೇಣುಕಮ್ಮ ಕಾರು ಹತ್ತಲು ರಸ್ತೆ ದಾಟುತ್ತಿದ್ದರು. … Continue reading ಹಗಲಲ್ಲೇ ಪಾನಮತ್ತನಾಗಿ ಬೈಕ್ ಓಡಿಸಿ ಪಾದಚಾರಿಗೆ ಗುದ್ದಿದ; ಮಹಿಳೆ ಸಾವು, ಸವಾರನ ಸ್ಥಿತಿಯೂ ಗಂಭೀರ..