ನವದೆಹಲಿ: ಜವಾಹರಲಾಲ್ ನೆಹರು ವಿವಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಡಪಂಥೀಯರ ಕೈವಾಡ ಇದೆ ಎಂದು ದೇಶದ ಮುಂಚೂಣಿ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇರವಾಗಿ ಆರೋಪಿಸಿದೆ.
ಎಬಿವಿಪಿಯ ಜೆಎನ್ಯು ಘಟಕದ ಕಾರ್ಯದರ್ಶಿ ಮನೀರ್ಶ ಜಾನ್ಗಿಡ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಂಘಟಿತ ಮಾದರಿಯಲ್ಲಿ ಎಡಪಂಥೀಯ ಕಾರ್ಯಕರ್ತರು ಈ ದಾಳಿಯನ್ನು ನಡೆಸಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ದಾಳಿ ನಡೆಸಿದವರ ನೇತೃತ್ವವನ್ನು ಜೆಎನ್ಯು ಸ್ಟೂಡೆಂಟ್ಸ್ ಯೂನಿಯನ್(ಜೆಎನ್ಯುಎಸ್ಯು) ಅಧ್ಯಕ್ಷ ಐಷೆ ಘೋಷ್ ವಹಿಸಿಕೊಂಡಿದ್ದರು.
ಈ ಗುಂಪು ಕಾವೇರಿ ಹಾಸ್ಟೆಲ್ ಕಡೆಗೆ ಮುನ್ನುಗ್ಗಿ ಬರುತ್ತಿದೆ ಎಂಬ ಮಾಹಿತಿ ಸಿಕ್ಕಿದ ಕಾರಣ, ನಾನು ಮತ್ತು ನನ್ನ ಗೆಳೆಯರು ಪೆರಿಯಾರ್ ಹಾಸ್ಟೆಲ್ನಲ್ಲಿ ಅವಿತುಕೊಂಡಿದ್ದೆವು. ಮುಖಕ್ಕೆ ಮಾಸ್ಕ್ ಧರಿಸಿದ್ದವರ ಕೈನಲ್ಲಿ ಲಾಠಿಗಳಿದ್ದವು. ಅವರು ಎಬಿವಿಪಿ ಕಾರ್ಯಕರ್ತರಿದ್ದ ರೂಮುಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ರೂಮುಗಳನ್ನು ಹಾನಿಗೆಡುವುತ್ತಿದ್ದರು. ನಾನು ಅವರಿಂದ ತಪ್ಪಿಸಿಕೊಂಡು ಓಡಲೆತ್ನಿಸಿದಾಗ ನನ್ನ ಮೇಲೂ ಅವರು ಲಾಠಿಯಿಂದ ಹಲ್ಲೆ ನಡೆಸಿದ್ದರು. ಆ ಹಲ್ಲೆಯ ಆಘಾತಕ್ಕೆ ನಾನು ಅರಿವು ತಪ್ಪಿ ಬಿದ್ದು ಬಿಟ್ಟಿದ್ದೆ. ಈ ದಾಳಿ ಭಾನುವಾರ ಸಂಜೆ 3.30-4 ಗಂಟೆ ಅವಧಿಯಲ್ಲಿ ಆಗಿತ್ತು ಎಂದು ಮನೀಷ್ ವಿವರಿಸಿದ್ದಾರೆ.
ಎಡಪಂಥೀಯರ ಈ ದಾಳಿಯಿಂದಾಗಿ ನಾನು ಮೂಳೆ ಮುರಿದುಕೊಂಡಿದ್ದಲ್ಲದೆ, ಫೋನ್ಗಳನ್ನೂ ಕಳೆದುಕೊಂಡೆವು. ಹೀಗಾಗಿ ಏಮ್ಸ್ಗೆ ಹೋದಾಗ ಯಾರನ್ನೂ ಸಂಪರ್ಕಿಸುವುದು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)