ಪ್ರೀತಿಸಿ ಓಡಿ ಹೋದ ಪ್ರೇಮಿಗಳು, ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ

ರಾಣೆಬೆನ್ನೂರ: ಪ್ರೀತಿಸಿದ ಯುವಕ, ಯುವತಿ ಓಡಿ ಹೋಗಿದ್ದಾರೆ ಎನ್ನುವ ಕಾರಣಕ್ಕೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎನ್ನುವ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಬೆಳಗಾವಿಯ ವಂಟಮೂರಿ ಗ್ರಾಮದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಂತಾಗಿದೆ. ಯುವಕನ ಮಾವ ಹಾಗೂ ಗ್ರಾಪಂ ಸದಸ್ಯ ಪ್ರಶಾಂತ ಕಬ್ಬಾರ (34) ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲೆ ಹಲ್ಲೆ ಮಾಡಿದ ತಾಲೂಕಿನ ಚಳಗೇರಿ ಗ್ರಾಮದ ಶಿವಾಜೆಪ್ಪ ಮರಿಯಪ್ಪ ಕಮದೋಡ, ಬಸವರಾಜಪ್ಪ ನೀಲಪ್ಪ ಬೆನಕನಕೊಂಡ, ಹರೀಶ … Continue reading ಪ್ರೀತಿಸಿ ಓಡಿ ಹೋದ ಪ್ರೇಮಿಗಳು, ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ