ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನದಲ್ಲಿ ನಿಧಿಗಾಗಿ ಮಹಿಳೆ ಹತ್ಯೆ: ರಾತ್ರಿಯಿಡೀ ಬೆಟ್ಟದಲ್ಲೇ ಎಸ್​ಪಿ ವಾಸ್ತವ್ಯ

ತುಮಕೂರು: ತಾಲೂಕಿನ ಜಕ್ಕೆನಹಳ್ಳಿ ಸಮೀಪದ ಮಿಂಚುಕಲ್ಲು ಬೆಟ್ಟದ ಆಂಜನೇಯ ದೇವಾಲಯದಲ್ಲಿ ನಿಧಿಗಳ್ಳರು ಮಹಿಳೆಯನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ನಿನ್ನೆ ರಾತ್ರಿಯಿಡೀ ಸ್ಥಳದಲ್ಲೇ ವಾಸ್ತವ್ಯ ಹೂಡಿತ್ತು. ಬೆಟ್ಟದ ಮೇಲಿರುವ ದೇವಾಲಯದ ಆಂಜನೇಯಸ್ವಾಮಿ ವಿಗ್ರಹದ ಮುಂಭಾಗ ನಿಧಿಗಾಗಿ ಅಗೆದು ಪೂಜೆ ಸಲ್ಲಿಸಿರುವ ದೃಶ್ಯ ಮತ್ತು ದೇವಾಲಯ ಆವರಣದಲ್ಲೇ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಇರುವುದು ಜುಲೈ 4ರಂದು ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ … Continue reading ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನದಲ್ಲಿ ನಿಧಿಗಾಗಿ ಮಹಿಳೆ ಹತ್ಯೆ: ರಾತ್ರಿಯಿಡೀ ಬೆಟ್ಟದಲ್ಲೇ ಎಸ್​ಪಿ ವಾಸ್ತವ್ಯ