ಬೆಂಗಳೂರು ಹೊರವಲಯದಲ್ಲಿ ಯುವಕರಿಬ್ಬರ ಕೊಲೆ: ರಸ್ತೆ ಸಮೀಪ ಶವ ನೋಡಿ ಬೆಚ್ಚಿಬಿದ್ದ ಸ್ಥಳೀಯರು

ಆನೇಕಲ್​: ಬೆಂಗಳೂರು ಹೊರವಲಯದಲ್ಲಿ ನಿನ್ನೆ(ಗುರುವಾರ) ಯುವಕರಿಬ್ಬರ ಜೋಡಿ ಕೊಲೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅತ್ತಿಬೆಲೆ ನಿವಾಸಿ ದೀಪಕ್ ಮತ್ತು ಮಾಯಸಂದ್ರ ನಿವಾಸಿ ಭಾಸ್ಕರ್ ಕೊಲೆಯಾದ ಯುವಕರು. ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಟಿವಿಎಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ದುಷ್ಕರ್ಮಿಗಳ ತಂಡ ಇಬ್ಬರನ್ನು ಬರ್ಬರವಾಗಿ ಕೊಂದು ಪರಾರಿಯಾಗಿದೆ. ಗುರುವಾರ ರಾತ್ರಿ 8ರಿಂದ 9 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಹಣಕಾಸು ವಿಚಾರಕ್ಕೆ ಕೊಲೆ ನಡೆದಿರುವ ಸಾಧ್ಯತೆ ಇದೆ. ಪಲ್ಸರ್ ಹಾಗೂ ಹೀರೋ ಎಕ್ಸ್ಟ್ರೀಮ್ ಬೈಕ್​ನಲ್ಲಿ ಹೋಗುತ್ತಿದ್ದ ಭಾಸ್ಕರ್​ ಮತ್ತು … Continue reading ಬೆಂಗಳೂರು ಹೊರವಲಯದಲ್ಲಿ ಯುವಕರಿಬ್ಬರ ಕೊಲೆ: ರಸ್ತೆ ಸಮೀಪ ಶವ ನೋಡಿ ಬೆಚ್ಚಿಬಿದ್ದ ಸ್ಥಳೀಯರು